Monday, 30 January 2017

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ... ಸಂಚಿಕೆ - 17

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ... ಸಂಚಿಕೆ - 17

ಮಕ್ಕಾ ವಿಜಯ....

ಮುಸ್ಲಿಮರು ಹುದೈಬಿಯ್ಯಃ ಒಪ್ಪಂದದ ಕರಾರುಗಳು ಪಾಲಿಸಿ ಮುಂದುವರಿದರು. ಆದರೆ ಕುರೈಶಿಗಳು ಕರಾರು ಮುರಿದರು. ಖುಝಾಅಃ ಗೋತ್ರದ ವಿರುದ್ಧ ಬನೂಬಕರ್ ವಂಶಸ್ಥರಿಗೆ ಕುರೈಶಿಗಳು ಸಹಾಯ ಮಾಡಿದರು. ಆಗ ಖುಝಾಅಃ ಗೋತ್ರದವರು ನೆಬಿ ಸ.ಅ ರವರ ಬಳಿ ಸಹಾಯ ಕೇಳಿದರು. ನೆಬಿ ಸ.ಅ ಅವರನ್ನು ಸಹಾಯಿಸಲು ಹತ್ತು ಸಾವಿರ ಸ್ವಹಾಬಿಗಳೊಂದಿಗೆ ಹೊರಟರು. ಇದು ಹಿಜ್ರಾ ಎಂಟನೇ ವರ್ಷದ ರಮಳಾನಿನಲ್ಲಾಗಿತ್ತು. ಅವರು ಮರ್ರುಳ್ಳಹ್ರಾನಿಗೆ ಬಂದು ತಲುಪಿದರು. ಕುರೈಶಿಗಳು ಇದು ತಿಳಿದಿರಲಿಲ್ಲ. ರಹಸ್ಯ ಮಾಹಿತಿಯನ್ನು ಕಲೆ ಹಾಕಲು ಹೊರಟಿದ್ದ ಅಬೂಸುಫ್ಯಾನ್, ಬುದೈಲ್, ಹಕೀಂ ಎಂಬವರನ್ನು ಮುಸ್ಲಿಮರು ಕಂಡರು. ಅವರಿಗೆ ಅಬ್ಬಾಸ್ ರ.ಅ ಅಭಯ ಹಸ್ತ ಚಾಚಿದರು. ಅವರು ನೆಬಿ ಸ.ಅ ರವರ ಬಳಿ ಸಾಗಿ ಇಸ್ಲಾಂ ಧರ್ಮ ಸ್ವೀಕಾರ ಕೂಡಾ ಮಾಡಿದರು.
         ನೆಬಿ ಸ.ಅ ಯಾತ್ರೆ ಮುಂದುವರಿಸಿದರು. ಖಾಲಿದುಬ್ನುಲ್ ವಲೀದ್ ರ.ಅ ರವರೊಂದಿಗೆ ಕೆಳಭಾಗದಿಂದ ಮಕ್ಕಾ ಪ್ರವೇಶಿಸಲು ನಿರ್ದೇಶಿಸಿದರು. ನೆಬಿ ಸ.ಅ ಸೈನ್ಯದೊಂದಿಗೆ ಮೇಲ್ಭಾಗದಿಂದ ಪ್ರವೇಶಿಸಿದರು. ಒಬ್ಬರನ್ನು ಕರೆದು ಈ ಕೆಳಗಿನ ಕಾರ್ಯಗಳನ್ನು ಹೇಳಲು ತಿಳಿಸಿದರು.
ಮಸ್ಜಿದುಲ್ ಹರಾಮಿಗೆ ಪ್ರವೇಶಿಸಿದವನು ನಿರ್ಭಯಿ,
ಅಬೂಸುಫ್ಯಾನರ ಮನೆ ಪ್ರವೇಶಿಸಿದವನು ನಿರ್ಭಯಿ,
ಸ್ವಂತ ಮನೆಯಲ್ಲಿ ವಾಸಿಸುವವನೂ ನಿರ್ಭಯಿಯಾಗಿದ್ದಾನೆ.
ಖಾಲಿದುಬ್ನುಲ್ ವಲೀದ್ ರ.ಅ ರವರನ್ನು ಕೆಲವರು ಆಯುಧದ ಮೂಲಕ ಎದುರಿಸಿದರೂ ಇಪ್ಪತ್ತೆಂಟು ಮಂದಿ ಸಾವಿಗೀಡಾಗುವುದರೊಂದಿಗೆ ಅವರಿಗೆ ಹಿಂತಿರುಗಿ ಓಡಬೇಕಾಯಿತು. ಈ ಸಂಘರ್ಷದಲ್ಲಿ ಎರಡು ಮುಸ್ಲಿಮರೂ ಮರಣ ಹೊಂದಿದರು. ನೆಬಿ ಸ.ಅ ರವರನ್ನು ಯಾರೂ ಎದುರಿಸಲು ಮುಂದೆ ಬರಲಿಲ್ಲ. ಹೀಗೆ ರಮಳಾನ್ ಇಪ್ಪತ್ತರಂದು ಶುಕ್ರವಾರ ನೆಬಿ ಸ.ಅ ಮಕ್ಕಾದಲ್ಲಿ ಪ್ರವೇಶಿಸಿದರು. ತಾಳ್ಮೆಯಿಂದ ವಿನಯದೊಂದಿಗೆ ಅಲ್ಲಾಹನನ್ನು ಸ್ತುತಿಸಿ ದ್ಸಿಕ್ರ್ ಹೇಳುತ್ತಾ ಪ್ರವೇಶಿಸಿದರು.
ನೆಬಿ ಸ.ಅ ಝಬೈರ್ ರ.ಅ ರವರೊಂದಿಗೆ ಧ್ವಜವನ್ನು ನಾಟಲು ತಿಳಿಸಿದರು. ಅನಂತರ ಅಲ್ಲಿ ಇಳಿದು ತವಾಫ್ ನಿರ್ವಹಿಸಿದರು. ಕಾಬಾದಲ್ಲಿದ್ದ ಚಿತ್ರಗಳನ್ನು ಒರೆಸಿ ಮಾಯಿಸಿದರು. ಅದರ ಎಲ್ಲಾ ಭಾಗಗಳಲ್ಲಿ ತಕ್ಬೀರ್ ಮೊಳಗಿಸಿದರು. ಇಬ್ರಾಹಿಂ ಮಖಾಮಿನ ಹತ್ತಿರ ನಮಾಜು ಮಾಡಿದರು. ಝಂಝಂ ನೀರು ಕುಡಿದರು. ಕಾಬಾದಲ್ಲಿದ್ದ ವಿಗ್ರಹಗಳನ್ನು ನಿವಾರಿಸಿ ಶುದ್ಧಗೊಳಿಸಿದರು. ಕಾಬಾದ ಬಾಗಿಲಿನ ಸಮೀಪ ನಿಂತು ಜನರೊಂದಿಗೆ ನೆಬಿ ಸ.ಅ ಮಾತನಾಡಿದರು. ಶತ್ರುಗಳಿಗೆ ಕ್ಷಮೆ ನೀಡಿದರು. ನೆಬಿ ಸ.ಅ ಹೇಳಿದರು : ನೀವು ಹೋಗಿರಿ..ನೀವು ಸ್ವತಂತ್ರರು.
     ಬಿಲಾಲ್ ರ.ಅ ರವರೊಂದಿಗೆ ಕಾಬಾದ ಮೇಲ್ಭಾಗಕ್ಕೆ ಹತ್ತಿ ಬಾಂಗ್ ಕೊಡಲು ನೆಬಿ ಸ.ಅ ನಿರ್ದೇಶಿಸಿದರು.ಪವಿತ್ರ ಮಕ್ಕಾದಲ್ಲಿ ಬಿಲಾಲ್ ರ.ಅ ರವರ ಮಾಧುರ್ಯದಿಂದ ಕೂಡಿದ ಬಾಂಗ್ ಕರೆ ಮಾರ್ಧ್ವನಿಸಿದವು.ಜನರು ಗುಂಪು ಗುಂಪಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.ಸ್ವಫಾದಲ್ಲಿ ಕುಳಿತು ನೆಬಿ ಸ.ಅ ಅವರೊಂದಿಗೆ ಪ್ರತಿಜ್ಞೆ ಸ್ವೀಕರಿಸಿದರು.ಮೊದಲಿಗೆ ವ್ರದ್ಧರು, ಬಳಿಕ ಮಕ್ಕಳು, ಪುರುಷರು ನಂತರ ಸ್ತ್ರೀಯರು ಪ್ರತಿಜ್ಞೆ ಮಾಡಿದರು.ಹದಿನೆಂಟು ದಿನ ನೆಬಿ ಸ.ಅ ಮಕ್ಕಾದಲ್ಲಿ ತಂಗಿದರು.ನಂತರ ಅತ್ತಾಬುಬ್ನು ಉಸೈದ್ ರ.ಅ ರವರಿಗೆ ಮಕ್ಕಾದ ಹೊಣೆಗಾರಿಕೆ ನೀಡಿ ಮದೀನಕ್ಕೆ ಮರಳಿದರು.

ಮುಂದುವರಿಯುವುದು....

🖊 ನವಾಝ್ ಸಖಾಫಿ ಉಳ್ಳಾಲ

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...