ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
---------------------------
ಸಂಚಿಕೆ -16
ಹುದೈಬಿಯ ಒಪ್ಪಂದ..
ನೆಬಿ ಸ.ಅ ಒಂದು ಕನಸು ಕಂಡರು.ಯಾವುದೇ ಭಯ ಆತಂಕವಿಲ್ಲದೆ ಸ್ವಹಾಬಿಗಳೊಂದಿಗೆ ಮಕ್ಕಾದ ಮಸ್ಜಿದುಲ್ ಹರಾಮಿಗೆ ಪ್ರವೇಶಿಸುವ ಕನಸು ಕಂಡರು.ಈ ಸಂತೋಷ ವಾರ್ತೆ ಅನುಯಾಯಿಗಳಿಗೆ ತಿಳಿಸಿದ ನೆಬಿ ಸ.ಅ ಹಿಜ್ರಾ ಆರನೆಯ ವರ್ಷ ದ್ಸುಲ್ ಕಅದಃ ತಿಂಗಳಲ್ಲಿ ಸಾವಿರದ ಐನೂರು ಮಂದಿಯೊಂದಿಗೆ ಉಮ್ರಃಕ್ಕೆ ಹೊರಟರು.ಅವರು ಉಸ್ಫಾನ್ ತಲುಪಿದಾಗ ಕುರೈಶಿಗಳು ಅವರನ್ನು ತಡೆಯಲು ಸಂಘಟಿತರಾದ ವಾರ್ತೆಯೂ ಲಭಿಸಿತು.ಮುಸ್ಲಿಮರು 200 ಕುದುರೆ ಸೈನ್ಯದೊಂದಿಗೆ ಖಾಲಿದು ಬ್ನು ವಲೀದರ ನೇತ್ರತ್ವದಲ್ಲಿ ಮೊದಲು ಹೋದರು.ನೆಬಿ ಸ.ಅ ಮತ್ತು ಬಾಕಿಯಿದ್ದವರು ಬೇರೊಂದು ದಾರಿಯ ಮೂಲಕ ಹುದೈಬಿಯ್ಯಃ ಎಂಬಲ್ಲಿ ತಲುಪಿದರು.
ಅಲ್ಲಿ ಕುರೈಶಿಗಳ ದೂತರಾದ ನಾಲ್ಕು ಸಹಚರರು ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಬುದೈಲ್, ಮಿಕ್ರಝ್, ಹುಲೈಸ್, ಉರ್ವ ಎಂಬ ದೂತರಾಗಿದ್ದರು.ಅವರು ಒಬ್ಬೊಬ್ಬರಾಗಿ ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಯುದ್ಧಕ್ಕಲ್ಲ..ಉಮ್ರ ನಿರ್ವಹಿಸುವ ಸಲುವಾಗಿ ಬಂದದ್ದು ಎಂದು ಅವರಿಗೆ ನೆಬಿ ಸ.ಅ ಮನದಟ್ಟು ಮಾಡಿದರು.ನೆಬಿ ಸ.ಅ ರವರನ್ನು ಮತ್ತು ಸ್ವಹಾಬಿಗಳನ್ನು ತಡೆಯಬಾರದೆಂದು ಎಲ್ಲಾ ನಾಲ್ಕು ದೂತರೂ ಕುರೈಶಿಗಳೊಂದಿಗೆ ಹೇಳಿದರು.
ಉರ್ವತುಬ್ನು ಮಸ್ಊದ್ ಎಂಬ ದೂತ ಹೇಳಿದನು.ಜನರೇ ..ನಾನು ಹಲವಾರು ರಾಜ ಮಹಾರಾಜರ ಬಳಿ ತೆರಳಿದ್ದೇನೆ.ಖೈಸರ್, ಕಿಸ್ರಾ, ನಜ್ಜಾಶೀ ಮುಂತಾದ ರಾಜರನ್ನು ಭೇಟಿಯಾಗಿದ್ದೇನೆ.ಅಲ್ಲಾಹನಾಣೆ ಸತ್ಯ!! ಮುಹಮ್ಮದನನ್ನು ಅನುಯಾಯಿಗಳು ಗೌರವಿಸುವ ಹಾಗೆ ಒಬ್ಬನೇ ಒಬ್ಬ ರಾಜನನ್ನು ಅನುಯಾಯಿಗಳು ಗೌರವಿಸುವುದು ನಾನು ಕಂಡಿಲ್ಲ.ಆ ಮುಹಮ್ಮದ್ ಉತ್ತಮ ನಿರ್ದೇಶನವನ್ನಾಗಿದೆ ನಮ್ಮ ಮುಂದೆ ಇಟ್ಟದ್ದು.ಅದನ್ನು ಸ್ವೀಕರಿಸಿರಿ..
ಆದರೆ ಕುರೈಶಿಗಳು ನೆಬಿ ಸ.ಅ ರವರನ್ನು ತಡೆಯುವ ತೀರ್ಮಾನಕ್ಕೆಯೇ ಬಂದರು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರನ್ನು ಕುರೈಶಿಗಳ ಬಳಿ ಕಳುಹಿಸಿದರು.ದುರ್ಬಲರಾದ ನೈಜ ವಿಶ್ವಾಸಿಗಳ ವಿಜಯ ಸಮೀಪವಾಗಿದೆಯೆಂದು ತಿಳಿಸಿ ಕುರೈಶಿಗಳಿಗೆ ನೆಬಿ ಸ.ಅ ರವರು ಮತ್ತು ಅನುಯಾಯಿಗಳು ಬಂದ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ ಕೊಡುವ ನಿಟ್ಟಿನಲ್ಲಿ ಉಸ್ಮಾನ್ ರ.ಅ ರವರ ನಿಯೋಗ ಅವರ ಬಳಿ ಹೋಗಿತ್ತು.ಕುರೈಶಿಗಳು ಉಸ್ಮಾನ್ ರ.ಅ ರವರೊಂದಿಗೆ ಹೇಳಿದರು.ನಿನ್ನ ಮುಹಮ್ಮದ್ ಶಕ್ತಿ ಪ್ರಯೋಗಿಸಿ ಇಲ್ಲಿ ಪ್ರವೇಶಿಸಲಾರ.ಮುಂದುವರಿದು ಕುರೈಶಿಗಳು ಉಸ್ಮಾನ್ ರ.ಅ ತಡೆ ಹಿಡಿದು ಬಂಧನದಲ್ಲಿಟ್ಟರು.ಈ ಮಧ್ಯೆ ಉಸ್ಮಾನ್ ರ.ಅ ಕೊಲ್ಲಲ್ಪಟ್ಟರು ಎಂಬ ವಾರ್ತೆ ಬಹಳ ರಭಸದಿಂದ ಮುಸ್ಲಿಮರೆಡೆಯಲ್ಲಿ ಹರಡಿತು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರ ಮರಣಕ್ಕೆ ಪ್ರತೀಕಾರ ತೀರಿಸಲು ಸ್ವಹಾಬಿಗಳೊಂದಿಗೆ ಕರಾರು ಸ್ವೀಕರಿಸಿದರು.ಈ ಕರಾರಿಗೆ ಬೈಅತು ರಿಲ್ವಾನ್ ಎಂದು ಹೆಸರು.
ಈ ಬೈಅತಿನ ಕುರಿತು ತಿಳಿದ ಕುರೈಶಿಗಳು ಭಯಗೊಂಡರು.ಅವರು ಸುಹೈಲ್ ಇಬ್ನು ಅಮ್ರ್ ನನ್ನು ಮುಸ್ಲಿಮರ ಬಳಿ ಮಾತುಕತೆಗೆ ಕಳುಹಿಸಿದರು.ಕೊನೆಗೆ ಒಂದು ಒಪ್ಪಂದಕ್ಕೆ ಬರಲಾಯಿತು.ಆ ಒಪ್ಪಂದದ ವ್ಯವಸ್ಥೆಗಳು ಈ ಕೆಳಗಿನವುಗಳಾಗಿವೆ.
1 - ಈ ವರ್ಷ ನೆಬಿ ಸ.ಅ ಮತ್ತು ಅನುಯಾಯಿಗಳು ಉಮ್ರ ನಿರ್ವಹಿಸದೇನೇ ಮರಳಿ ಹೋಗಬೇಕು.ಮುಂದಿನ ವರ್ಷ ಬರಬಹುದು.ಅದೂ ಕೂಡಾ 3 ದಿವಸ ಮಾತ್ರ ಮಕ್ಕಾದಲ್ಲಿರಬೇಕು.
2 - ಹತ್ತು ವರ್ಷಗಳ ಕಾಲ ಎರಡು ವಿಭಾಗಗಳು ಯುದ್ಧವನ್ನು ಮಾಡಬಾರದು.
3 - ಕುರೈಶಿಗಳಲ್ಲಿ ಯಾರಾದರೂ ಮುಸ್ಲಿಮರ ಭಾಗಕ್ಕೆ ಹೋದರೆ ಅವರನ್ನು ಮರಳಿ ಕುರೈಶಿಗಳಿಗೆ ಒಪ್ಪಿಸಬೇಕು.ಮುಸ್ಲಿಮರ ಕಡೆಯಿಂದ ಯಾರಾದರೂ ಕುರೈಶಿಗಳ ಭಾಗಕ್ಕೆ ಹೋದರೆ ಅವರನ್ನು ಮರಳಿಸಿ ಮುಸ್ಲಿಮರಿಗೆ ಒಪ್ಪಿಸಲಿಕ್ಕಿಲ್ಲ.
4 - ನೆಬಿ ಸ.ಅ ರವರೊಂದಿಗೂ ಕುರೈಶಿಗಳೊಂದಿಗೂ ಮಿತ್ರತ್ವ ಬೆಳೆಸಬಹುದು.ಈ ಶರತ್ತನ್ನು ಅನುಸರಿಸಿ ಬನೂಬಕರ್ ವಂಶಸ್ಥರು ಕುರೈಶಿಗಳೊಂದಿಗೂ ಖುಝಾಅಃ ಗೋತ್ರದವರು ನೆಬಿ ಸ.ಅ ರವರೊಂದಿಗೂ ಮಿತ್ರತ್ವ ಬೆಳೆಸಿದರು.ಈ ಒಪ್ಪಂದವು ಹುದೈಬಿಯ್ಯಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಟ್ಟಿತು.
ಒಪ್ಪಂದ ಪೂರ್ಣವಾಗುವುದರೊಂದಿಗೆ ಅದರ ವ್ಯವಸ್ಥೆಗಳನ್ನನುಸರಿಸಿ ನೆಬಿ ಸ.ಅ ಮದೀನಕ್ಕೆ ತಿರುಗಿ ಹೋದರು.ಒಂದು ವರ್ಷ ಕಳೆದು ದ್ಸುಲ್ ಕಅದಃ ತಿಂಗಳಿನಲ್ಲಿ ಬಂದು ಉಮ್ರತುಲ್ ಖಲಾಹ್ ನಿರ್ವಹಿಸಿದರು.ಹುದೈಬಿಯ್ಯಃ ಒಪ್ಪಂದದ ವ್ಯವಸ್ಥೆಗಳು ಮುಸ್ಲಿಮರಿಗೆ ತೀವ್ರ ಪ್ರಯಾಸಕರವಾಗಿದ್ದರೂ ಅದರಲ್ಲಿ ಅಡಕವಾಗಿದ್ದ ಪ್ರಯೋಜನಗಳು ತುಂಬಾ ಇದ್ದವು.ಕುರೈಶಿಗಳು ಮುಸ್ಲಿಮರ ಸ್ವಭಾವ ಗುಣ ಮಹಿಮೆಯನ್ನು ಕಂಡು ಅರಿತರು.ಶಾಂತಿ ಸಮಾಧಾನದ ವಾತಾವರಣ ನೆಲೆ ನಿಂತವು.ಎರಡೂ ವಿಭಾಗದವರು ಬೆರೆತು ಜೀವಿಸಲು ಸಮಯ ಲಭಿಸಿದುದರಿಂದ ಪವಿತ್ರ ಇಸ್ಲಾಮಿಗೆ ಹೆಚ್ಚು ಪ್ರಚಾರ ಲಭಿಸಿದವು.ಇಸ್ಲಾಂ ಧರ್ಮ ಬೋಧನೆಯ ಹಾದಿಯಲ್ಲಿದ್ದ ಸಂಕಷ್ಟಗಳ ತೊಡಕುಗಳು ನಿವಾರಣೆಯಾಯಿತು.ಅರಬ್ ಗೋತ್ರ ನಾಯಕರಿಗೂ ರಾಜರುಗಳಿಗೂ ಇಸ್ಲಾಮಿಗೆ ಆಹ್ವಾನಿಸಿ ಪತ್ರ ಬರೆದು ತನ್ನ ದೂತರ ಮೂಲಕ ರವಾನಿಸಲು ನೆಬಿ ಸ.ಅ ರವರಿಗೆ ಸಾಧ್ಯವಾಯಿತು.ಆದುದರಿಂದಾಗಿದೆ ಈ ಹುದೈಬಿಯ್ಯಃ ಒಪ್ಪಂದವನ್ನು ಕುರಾನ್ ಫತ್ಹುಲ್ ಮುಬೀನ್ ( ಸ್ಪಷ್ಟವಾದ ವಿಜಯ ) ಎಂದು ವಿಶ್ಲೇಶಿಸಿದ್ದು.
ಹುದೈಬಿಯ್ಯಃ ಒಪ್ಪಂದದ ಮೂಲಕ ಇಸ್ಲಾಂ ಧರ್ಮ ಬೋಧನೆಯ ಮಾರ್ಗ ಸುಖಕರವಾಗಿದ್ದರೂ ಖೈಬರ್ ನಲ್ಲಿ ವಾಸಿಸುತ್ತಿದ್ದ ಯಹೂದಿಗಳು ಸಮಸ್ಯೆಗಳನ್ನು ಸ್ರಷ್ಟಿಸುತ್ತಿದ್ದರು.ಆಗ ನೆಬಿ ಸ.ಅ ಅವರನ್ನು ಎದುರಿಸಲು ಹಿಜ್ರಾ ಏಳನೆಯ ವರ್ಷ ಮುಹರ್ರಂ ತಿಂಗಳಿನಲ್ಲಿ ಸಾವಿರದ ಆರು ನೂರು ಸ್ವಹಾಬಿಗಳೊಂದಿಗೆ ಖೈಬರಿಗೆ ಹೊರಟರು.ಖೈಬರ್ ಮತ್ತು ಇತರ ಯಹೂದಿ ಕೇಂದ್ರಗಳಾಗಿದ್ದ ಫದಕ್, ವಾದಿಲ್ ಖುರಾ, ತೈಮಾಹ್ ಇಸ್ಲಾಮಿನ ವಶವಾಯಿತು.
ಮುಂದುವರಿಯುವುದು.....
ಮುಂದಿನ ಸಂಚಿಕೆಯಲ್ಲಿ ಮಕ್ಕಾ ವಿಜಯ...
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.
ಮೂಲ : ಅರಬಿ ಮಲಯಾಳದಲ್ಲಿ
8105745760