Monday, 21 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ - 16

  ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -16

ಹುದೈಬಿಯ ಒಪ್ಪಂದ..

ನೆಬಿ ಸ.ಅ ಒಂದು ಕನಸು ಕಂಡರು.ಯಾವುದೇ ಭಯ ಆತಂಕವಿಲ್ಲದೆ ಸ್ವಹಾಬಿಗಳೊಂದಿಗೆ ಮಕ್ಕಾದ ಮಸ್ಜಿದುಲ್ ಹರಾಮಿಗೆ ಪ್ರವೇಶಿಸುವ ಕನಸು ಕಂಡರು.ಈ ಸಂತೋಷ ವಾರ್ತೆ ಅನುಯಾಯಿಗಳಿಗೆ ತಿಳಿಸಿದ ನೆಬಿ ಸ.ಅ ಹಿಜ್ರಾ ಆರನೆಯ ವರ್ಷ ದ್ಸುಲ್ ಕಅದಃ ತಿಂಗಳಲ್ಲಿ ಸಾವಿರದ ಐನೂರು ಮಂದಿಯೊಂದಿಗೆ ಉಮ್ರಃಕ್ಕೆ ಹೊರಟರು.ಅವರು ಉಸ್ಫಾನ್ ತಲುಪಿದಾಗ ಕುರೈಶಿಗಳು ಅವರನ್ನು ತಡೆಯಲು ಸಂಘಟಿತರಾದ ವಾರ್ತೆಯೂ ಲಭಿಸಿತು.ಮುಸ್ಲಿಮರು 200 ಕುದುರೆ ಸೈನ್ಯದೊಂದಿಗೆ ಖಾಲಿದು ಬ್ನು ವಲೀದರ ನೇತ್ರತ್ವದಲ್ಲಿ ಮೊದಲು ಹೋದರು.ನೆಬಿ ಸ.ಅ ಮತ್ತು ಬಾಕಿಯಿದ್ದವರು ಬೇರೊಂದು ದಾರಿಯ ಮೂಲಕ ಹುದೈಬಿಯ್ಯಃ ಎಂಬಲ್ಲಿ ತಲುಪಿದರು.
        ಅಲ್ಲಿ ಕುರೈಶಿಗಳ ದೂತರಾದ ನಾಲ್ಕು ಸಹಚರರು ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಬುದೈಲ್, ಮಿಕ್ರಝ್, ಹುಲೈಸ್, ಉರ್ವ ಎಂಬ ದೂತರಾಗಿದ್ದರು.ಅವರು ಒಬ್ಬೊಬ್ಬರಾಗಿ ನೆಬಿ ಸ.ಅ ರವರನ್ನು ಸಂದರ್ಶಿಸಿದರು.ಯುದ್ಧಕ್ಕಲ್ಲ..ಉಮ್ರ ನಿರ್ವಹಿಸುವ ಸಲುವಾಗಿ ಬಂದದ್ದು ಎಂದು ಅವರಿಗೆ ನೆಬಿ ಸ.ಅ ಮನದಟ್ಟು ಮಾಡಿದರು.ನೆಬಿ ಸ.ಅ ರವರನ್ನು ಮತ್ತು ಸ್ವಹಾಬಿಗಳನ್ನು ತಡೆಯಬಾರದೆಂದು ಎಲ್ಲಾ ನಾಲ್ಕು ದೂತರೂ ಕುರೈಶಿಗಳೊಂದಿಗೆ ಹೇಳಿದರು.
ಉರ್ವತುಬ್ನು ಮಸ್ಊದ್ ಎಂಬ ದೂತ ಹೇಳಿದನು.ಜನರೇ ..ನಾನು ಹಲವಾರು ರಾಜ ಮಹಾರಾಜರ ಬಳಿ ತೆರಳಿದ್ದೇನೆ.ಖೈಸರ್, ಕಿಸ್ರಾ, ನಜ್ಜಾಶೀ ಮುಂತಾದ ರಾಜರನ್ನು ಭೇಟಿಯಾಗಿದ್ದೇನೆ.ಅಲ್ಲಾಹನಾಣೆ ಸತ್ಯ!! ಮುಹಮ್ಮದನನ್ನು ಅನುಯಾಯಿಗಳು ಗೌರವಿಸುವ ಹಾಗೆ ಒಬ್ಬನೇ ಒಬ್ಬ ರಾಜನನ್ನು ಅನುಯಾಯಿಗಳು ಗೌರವಿಸುವುದು ನಾನು ಕಂಡಿಲ್ಲ.ಆ ಮುಹಮ್ಮದ್ ಉತ್ತಮ ನಿರ್ದೇಶನವನ್ನಾಗಿದೆ ನಮ್ಮ ಮುಂದೆ ಇಟ್ಟದ್ದು.ಅದನ್ನು ಸ್ವೀಕರಿಸಿರಿ..
            ಆದರೆ ಕುರೈಶಿಗಳು ನೆಬಿ ಸ.ಅ ರವರನ್ನು ತಡೆಯುವ ತೀರ್ಮಾನಕ್ಕೆಯೇ ಬಂದರು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರನ್ನು ಕುರೈಶಿಗಳ ಬಳಿ ಕಳುಹಿಸಿದರು.ದುರ್ಬಲರಾದ ನೈಜ ವಿಶ್ವಾಸಿಗಳ ವಿಜಯ ಸಮೀಪವಾಗಿದೆಯೆಂದು ತಿಳಿಸಿ ಕುರೈಶಿಗಳಿಗೆ ನೆಬಿ ಸ.ಅ ರವರು ಮತ್ತು ಅನುಯಾಯಿಗಳು ಬಂದ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ ಕೊಡುವ ನಿಟ್ಟಿನಲ್ಲಿ ಉಸ್ಮಾನ್ ರ.ಅ ರವರ ನಿಯೋಗ ಅವರ ಬಳಿ ಹೋಗಿತ್ತು.ಕುರೈಶಿಗಳು ಉಸ್ಮಾನ್ ರ.ಅ ರವರೊಂದಿಗೆ ಹೇಳಿದರು.ನಿನ್ನ ಮುಹಮ್ಮದ್ ಶಕ್ತಿ ಪ್ರಯೋಗಿಸಿ ಇಲ್ಲಿ ಪ್ರವೇಶಿಸಲಾರ.ಮುಂದುವರಿದು ಕುರೈಶಿಗಳು ಉಸ್ಮಾನ್ ರ.ಅ ತಡೆ ಹಿಡಿದು ಬಂಧನದಲ್ಲಿಟ್ಟರು.ಈ ಮಧ್ಯೆ ಉಸ್ಮಾನ್ ರ.ಅ ಕೊಲ್ಲಲ್ಪಟ್ಟರು ಎಂಬ ವಾರ್ತೆ ಬಹಳ ರಭಸದಿಂದ ಮುಸ್ಲಿಮರೆಡೆಯಲ್ಲಿ ಹರಡಿತು.ಆಗ ನೆಬಿ ಸ.ಅ ಉಸ್ಮಾನ್ ರ.ಅ ರವರ ಮರಣಕ್ಕೆ ಪ್ರತೀಕಾರ ತೀರಿಸಲು ಸ್ವಹಾಬಿಗಳೊಂದಿಗೆ ಕರಾರು ಸ್ವೀಕರಿಸಿದರು.ಈ ಕರಾರಿಗೆ ಬೈಅತು ರಿಲ್ವಾನ್ ಎಂದು ಹೆಸರು.
            ಈ ಬೈಅತಿನ ಕುರಿತು ತಿಳಿದ ಕುರೈಶಿಗಳು ಭಯಗೊಂಡರು.ಅವರು ಸುಹೈಲ್ ಇಬ್ನು ಅಮ್ರ್ ನನ್ನು ಮುಸ್ಲಿಮರ ಬಳಿ ಮಾತುಕತೆಗೆ ಕಳುಹಿಸಿದರು.ಕೊನೆಗೆ ಒಂದು ಒಪ್ಪಂದಕ್ಕೆ ಬರಲಾಯಿತು.ಆ ಒಪ್ಪಂದದ ವ್ಯವಸ್ಥೆಗಳು ಈ ಕೆಳಗಿನವುಗಳಾಗಿವೆ.

1 - ಈ ವರ್ಷ ನೆಬಿ ಸ.ಅ ಮತ್ತು ಅನುಯಾಯಿಗಳು ಉಮ್ರ ನಿರ್ವಹಿಸದೇನೇ ಮರಳಿ ಹೋಗಬೇಕು.ಮುಂದಿನ ವರ್ಷ ಬರಬಹುದು.ಅದೂ ಕೂಡಾ 3 ದಿವಸ ಮಾತ್ರ ಮಕ್ಕಾದಲ್ಲಿರಬೇಕು.

2 - ಹತ್ತು ವರ್ಷಗಳ ಕಾಲ ಎರಡು ವಿಭಾಗಗಳು ಯುದ್ಧವನ್ನು ಮಾಡಬಾರದು.

3 - ಕುರೈಶಿಗಳಲ್ಲಿ ಯಾರಾದರೂ ಮುಸ್ಲಿಮರ ಭಾಗಕ್ಕೆ ಹೋದರೆ ಅವರನ್ನು ಮರಳಿ ಕುರೈಶಿಗಳಿಗೆ ಒಪ್ಪಿಸಬೇಕು.ಮುಸ್ಲಿಮರ ಕಡೆಯಿಂದ ಯಾರಾದರೂ ಕುರೈಶಿಗಳ ಭಾಗಕ್ಕೆ ಹೋದರೆ ಅವರನ್ನು ಮರಳಿಸಿ ಮುಸ್ಲಿಮರಿಗೆ ಒಪ್ಪಿಸಲಿಕ್ಕಿಲ್ಲ.

4 - ನೆಬಿ ಸ.ಅ ರವರೊಂದಿಗೂ ಕುರೈಶಿಗಳೊಂದಿಗೂ ಮಿತ್ರತ್ವ ಬೆಳೆಸಬಹುದು.ಈ ಶರತ್ತನ್ನು ಅನುಸರಿಸಿ ಬನೂಬಕರ್ ವಂಶಸ್ಥರು ಕುರೈಶಿಗಳೊಂದಿಗೂ ಖುಝಾಅಃ ಗೋತ್ರದವರು ನೆಬಿ ಸ.ಅ ರವರೊಂದಿಗೂ ಮಿತ್ರತ್ವ ಬೆಳೆಸಿದರು.ಈ ಒಪ್ಪಂದವು ಹುದೈಬಿಯ್ಯಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಟ್ಟಿತು.

ಒಪ್ಪಂದ ಪೂರ್ಣವಾಗುವುದರೊಂದಿಗೆ ಅದರ ವ್ಯವಸ್ಥೆಗಳನ್ನನುಸರಿಸಿ ನೆಬಿ ಸ.ಅ ಮದೀನಕ್ಕೆ ತಿರುಗಿ ಹೋದರು.ಒಂದು ವರ್ಷ ಕಳೆದು ದ್ಸುಲ್ ಕಅದಃ ತಿಂಗಳಿನಲ್ಲಿ ಬಂದು ಉಮ್ರತುಲ್ ಖಲಾಹ್ ನಿರ್ವಹಿಸಿದರು.ಹುದೈಬಿಯ್ಯಃ ಒಪ್ಪಂದದ ವ್ಯವಸ್ಥೆಗಳು ಮುಸ್ಲಿಮರಿಗೆ ತೀವ್ರ ಪ್ರಯಾಸಕರವಾಗಿದ್ದರೂ ಅದರಲ್ಲಿ ಅಡಕವಾಗಿದ್ದ ಪ್ರಯೋಜನಗಳು ತುಂಬಾ ಇದ್ದವು.ಕುರೈಶಿಗಳು ಮುಸ್ಲಿಮರ ಸ್ವಭಾವ ಗುಣ ಮಹಿಮೆಯನ್ನು ಕಂಡು ಅರಿತರು.ಶಾಂತಿ ಸಮಾಧಾನದ ವಾತಾವರಣ ನೆಲೆ ನಿಂತವು.ಎರಡೂ ವಿಭಾಗದವರು ಬೆರೆತು ಜೀವಿಸಲು ಸಮಯ ಲಭಿಸಿದುದರಿಂದ ಪವಿತ್ರ ಇಸ್ಲಾಮಿಗೆ ಹೆಚ್ಚು ಪ್ರಚಾರ ಲಭಿಸಿದವು.ಇಸ್ಲಾಂ ಧರ್ಮ ಬೋಧನೆಯ ಹಾದಿಯಲ್ಲಿದ್ದ ಸಂಕಷ್ಟಗಳ ತೊಡಕುಗಳು ನಿವಾರಣೆಯಾಯಿತು.ಅರಬ್ ಗೋತ್ರ ನಾಯಕರಿಗೂ ರಾಜರುಗಳಿಗೂ ಇಸ್ಲಾಮಿಗೆ ಆಹ್ವಾನಿಸಿ ಪತ್ರ ಬರೆದು ತನ್ನ ದೂತರ ಮೂಲಕ ರವಾನಿಸಲು ನೆಬಿ ಸ.ಅ ರವರಿಗೆ ಸಾಧ್ಯವಾಯಿತು.ಆದುದರಿಂದಾಗಿದೆ ಈ ಹುದೈಬಿಯ್ಯಃ ಒಪ್ಪಂದವನ್ನು ಕುರಾನ್ ಫತ್ಹುಲ್ ಮುಬೀನ್ ( ಸ್ಪಷ್ಟವಾದ ವಿಜಯ ) ಎಂದು ವಿಶ್ಲೇಶಿಸಿದ್ದು.
         ಹುದೈಬಿಯ್ಯಃ ಒಪ್ಪಂದದ ಮೂಲಕ ಇಸ್ಲಾಂ ಧರ್ಮ ಬೋಧನೆಯ ಮಾರ್ಗ ಸುಖಕರವಾಗಿದ್ದರೂ ಖೈಬರ್ ನಲ್ಲಿ ವಾಸಿಸುತ್ತಿದ್ದ ಯಹೂದಿಗಳು ಸಮಸ್ಯೆಗಳನ್ನು ಸ್ರಷ್ಟಿಸುತ್ತಿದ್ದರು.ಆಗ ನೆಬಿ ಸ.ಅ ಅವರನ್ನು ಎದುರಿಸಲು ಹಿಜ್ರಾ ಏಳನೆಯ ವರ್ಷ ಮುಹರ್‍ರಂ ತಿಂಗಳಿನಲ್ಲಿ ಸಾವಿರದ ಆರು ನೂರು ಸ್ವಹಾಬಿಗಳೊಂದಿಗೆ ಖೈಬರಿಗೆ ಹೊರಟರು.ಖೈಬರ್ ಮತ್ತು ಇತರ ಯಹೂದಿ ಕೇಂದ್ರಗಳಾಗಿದ್ದ ಫದಕ್, ವಾದಿಲ್ ಖುರಾ, ತೈಮಾಹ್ ಇಸ್ಲಾಮಿನ ವಶವಾಯಿತು.

ಮುಂದುವರಿಯುವುದು.....

ಮುಂದಿನ ಸಂಚಿಕೆಯಲ್ಲಿ ಮಕ್ಕಾ ವಿಜಯ...

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.
ಮೂಲ : ಅರಬಿ ಮಲಯಾಳದಲ್ಲಿ
8105745760

Friday, 18 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ - 15

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -15

ಉಹುದ್ ಯುದ್ಧ...

ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲು ಕುರೈಶಿಗಳು ತೀರ್ಮಾನಿಸಿದರು.ಅಬೂಸುಫ್ಯಾನ್ ನೇತ್ರತ್ವದ ವ್ಯಾಪಾರ ಸಂಘದ ಲಾಭ ಪೂರ್ತಿ ಬದರ್ ಯುದ್ಧದ ಸೋಲಿಗೆ ಪ್ರತೀಕಾರ ತೀರಿಸಲಿಕ್ಕೆ ವಿನಿಯೋಗಿಸಲು ಅವರು ಒಮ್ಮತಾಭಿಪ್ರಾಯಕ್ಕೆ  ಬಂದರು.ಅಬೂಸುಫ್ಯಾನನ ನೇತ್ರತ್ವದಲ್ಲಿ 200 ಕುದುರೆಗಳೊಂದಿಗೆ ಸರ್ವ ಸನ್ನಾಹಗಳೊಂದಿಗೆ 3,000 ಯುದ್ಧ ಸೇನಾನಿಗಳು ಹೊರಟರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಆಲೋಚಿಸಿ ಕುರೈಶಿಗಳನ್ನು ಎದುರಿಸಲು ಸಾವಿರ ಸೈನಿಕರೊಂದಿಗೆ ರೆಡಿಯಾದರು.ಇದು ಹಿಜ್ರಾ ಮೂರನೇ ವರ್ಷ ಶವ್ವಾಲ್ ಹದಿನೈದರಂದಾಗಿತ್ತು.ದಾರಿ ಮಧ್ಯೆ ಮುಸ್ಲಿಂ ಸೈನ್ಯದಿಂದ ಮುನಾಫಿಖಾದ ಅಬ್ದುಲ್ಲಾಹಿ ಇಬ್ನು ಸಲೂಲ್ ಮತ್ತು ಆತನ ಮುನ್ನೂರು ಅನುಯಾಯಿಗಳು ತಿರುಗಿ ಹೋದರು.
      ನೆಬಿ ಸ.ಅ ಉಹುದ್ ಪರ್ವತದ ಬಳಿ ತಲುಪಿದರು.ಪರ್ವತದ ಹತ್ತಿರವಿರುವ ರುಮಾತ್ ಬೆಟ್ಟದ ಮೇಲೆ ಬಿಲ್ಲು ಎಸೆಯುವಿಕೆಯಲ್ಲಿ ನೈಪುಣ್ಯತೆ ಇರುವ ಐವತ್ತು ಮಂದಿಯನ್ನು ಕಾವಲು ನಿಲ್ಲಿಸಿದರು.ಆದೇಶ ಬಂದ ಮೇಲೆಯೇ ಅಲ್ಲಿಂದ ಇಳಿದು ಬರಬೇಕೆಂದು ನೆಬಿ ಸ.ಅ ಅವರೊಂದಿಗೆ ಸೂಚಿಸಿದರು.ಯುದ್ಧ ಪ್ರಾರಂಭವಾಯಿತು.ಕುರೈಶಿಗಳು ಪರಾಜಿತರಾದರು.ಚೆಲ್ಲಾಪಿಲ್ಲಿಯಾಗಿ ಕುರೈಶಿಗಳು ಓಡ ತೊಡಗಿದರು.ಇದನ್ನು ಕಂಡು ರುಮಾತ್ ಬೆಟ್ಟದ ಮೇಲಿದ್ಧ ಅಧಿಕ ಮಂದಿಯೂ ಕೆಳಗೆ ಇಳಿದು ಬಂದರು.ಆಗ ಕುರೈಶಿಗಳು ಖಾಲಿದು ಇಬ್ನು ವಲೀದನ ನೇತ್ರತ್ವದಲ್ಲಿ ಹಿಂದಿನಿಂದ ಬಂದು ಬೆಟ್ಟದಲ್ಲಿದ್ದ ಉಳಿದವರನ್ನು ವಧಿಸಿದರು.ಮುಸ್ಲಿಮರ ವಿರುದ್ಧ ಆಕ್ರಮಣ ತೀವ್ರ ಸ್ವರೂಪ ಪಡೆಯಿತು.ಪರಿಂಭ್ರಾತರಾದ ಮುಸ್ಲಿಮರು ಛಿನ್ನಭಿನ್ನವಾಗಿ ಓಡಿದರು.ಆದರೆ ನೆಬಿ ಸ.ಅ ಮತ್ತು ಕೆಲವು ಸ್ವಹಾಬಿಗಳು ವೀರಾವೇಶದಿಂದ ಹೋರಾಡಿದರು.ನೆಬಿ ಸ.ಅ ರವರ ಪವಿತ್ರ ಮುಖಕ್ಕೆ ಗಾಯವಾಯಿತು.ಮುಂದಿನ ಹಲ್ಲು ಸೀಳಿ ಹೋದವು.ಹಂಝ ರ.ಅ ಸೇರಿ ಎಪ್ಪತ್ತು ಮುಸ್ಲಿಮರು ಶಹೀದಾದರು.ಕುರೈಶಿಗಳಲ್ಲಿ ಇಪ್ಪತ್ತಮೂರು ಮಂದಿ ಸಾವನ್ನಪ್ಪಿದರು.ನೆಬಿ ಸ.ಅ ಆದೇಶವನ್ನು ಪಾಲಿಸದೆ ರುಮಾತ್ ಬೆಟ್ಟದಿಂದ ಇಳಿದು ಬಂದದ್ದೇ ಮುಸ್ಲಿಮರ ಪರಾಜಯಕ್ಕೆ ಹೇತುವಾಯಿತು..
                    ಹಿಜ್ರಾ ಎರಡನೆಯ ವರ್ಷ ಬನೂ ಖೈನುಖಾಹ್ ಗೋತ್ರದವರನ್ನು ನೆಬಿ ಸ.ಅ ಸಿರಿಯಾದ ಅಝ್ರಿಆತ್ ಗೆ ಗಡೀಪಾರು ಮಾಡಿದ್ದರು.ಅವರು ಶಾಂತಿ ಒಪ್ಪಂದವನ್ನು ಮುರಿದ ಕಾರಣದಿಂದ ಗಡೀಪಾರು ಮಾಡಲಾಗಿತ್ತು.ನೆಬಿ ಸ.ಅ ರವರನ್ನು ವಧಿಸಲು ಗೂಢಾಲೋಚನೆ ಮಾಡಿದ ಕಾರಣದಿಂದ ಹಿಜ್ರಾ ನಾಲ್ಕನೆಯ ವರ್ಷ ಬನುನ್ನಳೀರ್ ಗೋತ್ರದವರನ್ನು ಗಡೀಪಾರು ಮಾಡಲಾಯಿತು.ಅವರಲ್ಲಿ ಕೆಲವರು ಅಝ್ರಿಆತ್ ನಲ್ಲಿ ಮತ್ತು ಇನ್ನೂ ಕೆಲವರು ಖೈಬರ್ ನಲ್ಲಿ ವಾಸಿಸಿದರು.ಇದರ ಮಧ್ಯೆ ಬನುನ್ನಳೀರ್ ಗೋತ್ರದ ಒಂದು ಗುಂಪು ಕುರೈಶೀ ಮುಶ್ರಿಕರನ್ನು ಸಮೀಪಿಸಿ ನೆಬಿ ಸ.ಅ ರವರ ವಿರುದ್ಧ ಯುದ್ಧ ಹೂಡಲು ಪ್ರೇರೇಪಿಸಿದರು.ಕುರೈಶಿಗಳು ಓಕೆ ಅಂದರು.ಹೀಗೆ ಕುರೈಶಿಗಳು ಮತ್ತು ಗತಫಾನ್ ಗೋತ್ರದವರು ಅಬೂಸುಫ್ಯಾನನ ನೇತ್ರತ್ವದಲ್ಲಿ ಹತ್ತು ಸಾವಿರ ಬ್ರಹತ್ ಸೈನಿಕ ಪಡೆಯೊಂದಿಗೆ ಮದೀನವನ್ನು ಗುರಿಯಾಗಿಸಿ ಸಾಗಿದರು.ನೆಬಿ ಸ.ಅ ಸ್ವಹಾಬಿಗಳೊಂದಿಗೆ ಸೇರಿ ಒಂದು ತೀರ್ಮಾನಕ್ಕೆ ಬಂದು ಅವರನ್ನು ಪ್ರತಿರೋಧಿಸಲು ಮದೀನದ ಸುತ್ತಲೂ ಹೊಂಡವನ್ನು ನಿರ್ಮಿಸಿದರು.ಮೂರು ಸಾವಿರ ಧೀರ ಯೋಧರೊಂದಿಗೆ ನೆಬಿ ಸ.ಅ ಹೊಂಡದ ಈಚೆ ಕಡೆ ನಿಂತರು.ಇದು ಹಿಜ್ರಾ ಐದನೆಯ ವರ್ಷ ಶವ್ವಾಲ್ ತಿಂಗಳಲ್ಲಿಯಾಗಿತ್ತು.ಮುಶ್ರಿಕುಗಳು ಮದೀನದ ಸುತ್ತ ನಿರ್ಮಿಸಿದ ಹೊಂಡದ ಬಳಿ ತಲುಪಿದರು.ಮದೀನ ಪ್ರವೇಶಿಸಲಾಗದೆ ಚಡಪಡಿಸಿದರು.ಹದಿನೈದು ದಿವಸ ಹೊಂಡದ ಸಮೀಪ ನೆಲೆಯೂರಿದರು.ಹೊಂಡವನ್ನು ದಾಟಿ ಬರಲು ಯತ್ನಿಸಿದ ಕೆಲವರು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದರು.ಗುಂಡಿಯನ್ನು ದಾಟಿದ ಕೆಲ ಮುಶ್ರಿಕರನ್ನು ಮುಸ್ಲಿಮರು ಕೊಂದು ಹಾಕಿದರು.ಈ ಮಧ್ಯೆ ಬನೂ ಖುರೈಲ ಗೋತ್ರದವರು ಶಾಂತಿ ಕರಾರು ಮುರಿದು ಮಿತ್ರ ಪಾರ್ಟಿಯನ್ನು ಸಹಾಯಿಸಿದ್ದು ಮುಸ್ಲಿಮರನ್ನು ಪರಿಂಭ್ರಾತಗೊಳಿಸಿತು.ಈ ಸಂದರ್ಭದಲ್ಲಿ ಮುಸ್ಲಿಂ ಸೈನ್ಯದೊಂದಿಗಿದ್ದ ಮುನಾಫಿಖುಗಳು ಅವರವರ ಮನೆಗಳಿಗೆ ಹಿಂತಿರುಗಲು ಅನುಮತಿಯನ್ನು ಕೇಳಿದರು.ನೈಜ ಮುಸ್ಲಿಮರು ತೀವ್ರ ಸಂಕಷ್ಟದಲ್ಲಿ ಸಿಲುಕಿದರು.
          ಹೀಗಿರಲು ಶತ್ರು ಪಾಳಯದಲ್ಲಿದ್ದ ಗತಫಾನ್ ಗೋತ್ರದ ನುಐಮುಬ್ನು ಮಸ್ಊದ್ ಪವಿತ್ರ ಇಸ್ಲಾಂ ಸ್ವೀಕರಿಸಿದ್ದರು.ಇದು ಯಾರು ಕೂಡಾ ತಿಳಿದಿರಲಿಲ್ಲ.ಅವರು ನೆಬಿ ಸ.ಅ ರವರೊಂದಿಗೆ ರಹಸ್ಯ ಮಾತುಕತೆ ನಡೆಸಿ ಒಂದು ಸಂಚನ್ನು ರೂಪಿಸಿದರು.ನುಐಮುಬ್ನು ಮಸ್ಊದ್ ಯಹೂದಿ ಗೋತ್ರವಾದ ಬನೂ ಖುರೈಲ ರ ಬಳಿ ತೆರಳಿ ಮುಸ್ಲಿಮರ ವಿರುದ್ಧ ಕಾರ್ಯಾಚರಿಸಿದ ಕಾರಣ ಬೇರೆ ಯಹೂದಿ ಗೋತ್ರಗಳಿಗೆ ಉಂಟಾದ ಪರಿಸ್ಥಿತಿಯನ್ನು ನೆನಪಿಸಿ ಒಂದು ವೇಳೆ ಹಾಗೆ ಉಂಟಾದಲ್ಲಿ ಸಹಾಯ ( ಅಭಯ )ನಾವು ನೀಡುತ್ತೇವೆ ಎಂದು ಕುರೈಶಿಗಳೊಂದಿಗೆ ಮತ್ತು ಗತಫಾನ್ ಗೋತ್ರದವರೊಂದಿಗೆ ಒಪ್ಪಂದವನ್ನು ಸ್ವೀಕರಿಸಬೇಕು ಎಂದು ನಿರ್ದೇಶಿಸಿದರು.ಅಲ್ಲಿಂದಲೇ ಸೀದಾ ಕುರೈಶಿಗಳ ಮತ್ತು ಗತಫಾನ್ ಗೋತ್ರದವರ ಬಳಿ ತೆರಳಿ ಬನೂ ಖುರೈಲ ಗೋತ್ರದವರು ನಿಮ್ಮೊಂದಿಗೆ ಸೇರಿದ ಕಾರಣ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ತೀವ್ರ ದುಃಖಿತರಾಗಿದ್ದಾರೆ.ಇದೀಗ ತಮ್ಮ ಶರೀರವನ್ನು ರಕ್ಷಿಸಲು ನಿಮ್ಮ ನಾಯಕರನ್ನು ಮುಸ್ಲಿಮರಿಗೆ ಒಪ್ಪಿಸಲು ಅವರು ಮುಸ್ಲಿಮರೊಂದಿಗೆ ಒಪ್ಪಂದವನ್ನು ಮಾಡಿದ್ದಾರೆ ಎಂದು ನುಐಮುಬ್ನು ಮಸ್ಊದ್ ತಿಳಿಸಿದರು.ನುಐಮುಬ್ನು ಮಸ್ಊದರ ತಂತ್ರಗಾರಿಕೆಯ ಮಾತಿನಿಂದ ಕುರೈಶಿಗಳು ಮತ್ತು ಬನೂಖುರೈಲ ಗೋತ್ರದವರು ಪರಸ್ಪರ ಯುದ್ಧ ಮಾಡುವ ಸ್ಥಿತಿಗೆ ತಲುಪಿದರು.ಶನಿವಾರ ರಾತ್ರಿ ಅಬೂಸುಫ್ಯಾನ್ ಯಹೂದಿಯರನ್ನು ಮುಸ್ಲಿಮರೊಂದಿಗೆ ಯುದ್ಧ ಮಾಡಲು ಆಹ್ವಾನಿಸಿದನು.ಅವರು ಶನಿವಾರ ನಾವು ಯುದ್ಧ ಮಾಡುವುದಿಲ್ಲವೆಂದೂ ನಿಮ್ಮ ಎಪ್ಪತ್ತು ನಾಯಕರನ್ನು ನಮ್ಮಲ್ಲಿ ಅಡವಿಟ್ಟರೆ ಮಾತ್ರ ನಾವು ನಿಮ್ಮೊಂದಿಗೆ ಸೇರಿ ಯುದ್ಧಕ್ಕೆ ಕೈಜೋಡಿಸುವೆವು ಅಂದರು.ಹೀಗೆ ಪರಸ್ಪರ ಅವರವರೇ ಜಗಳಕ್ಕಿಳಿದರು.ಅಷ್ಟರಲ್ಲಿ ಭಯಂಕರ ಬಿರುಗಾಳಿ ಬೀಸಲಾರಂಭಿಸಿತು.ಪರಸ್ಪರ ಒಬ್ಬರನ್ನೊಬ್ಬರು ಕಾಣದ ರೀತಿಯಲ್ಲಿ ಭಾರೀ ಶೀತ ಮಾರುತ ಆವರಿಸಿತು.ಗಾಢ ಇರುಳಿನ ಮರೆಯಲ್ಲಿ ಮುಸ್ಲಿಮರು ಮತ್ತು ಯಹೂದಿಗಳು ಒಟ್ಟಾಗಿ ಆಕ್ರಮಣಗೈಯ್ಯುವರು ಎಂದು ಹೆದರಿ ಅಬೂ ಸುಫ್ಯಾನನ ನೇತ್ರತ್ವದಲ್ಲಿ ಬಂದ ಮುಶ್ರಿಕ್ ಸೈನ್ಯವು ಮರಳಿ ಹೋಯಿತು.
        ಖಂದಕ್ ಯುದ್ಧದಿಂದ ಮದೀನಕ್ಕೆ ಮರಳಿದ ತಕ್ಷಣ ನೆಬಿ ಸ.ಅ ವಂಚಕ ಯಹೂದಿ ಗೋತ್ರವಾದ ಬನೂಖುರೈಲ ರೊಂದಿಗೆ ಯುದ್ಧ ಮಾಡಿದರು.ಅವರ ಪುರುಷರುಗಳನ್ನು ಮುಸ್ಲಿಮರು ಕೊಂದು ಹಾಕಿದರು.ಸ್ತ್ರೀಯರನ್ನು ಮತ್ತು ಮಕ್ಕಳನ್ನು ಸೆರೆ ಹಿಡಿಯಲಾಯಿತು.

ಮುಂದುವರಿಯುವುದು.

® ನವಾಝ್ ಸಖಾಫಿ ಉಳ್ಳಾಲ
+918105745760

Wednesday, 16 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ 14

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -14

ಬದರ್ ಯುದ್ಧ...

ಹಿಜರಿ ಎರಡನೆಯ ವರ್ಷ ರಮಳಾನ್ ತಿಂಗಳ 17 ರಂದು ನಡೆದ ಐತಿಹಾಸಿಕ ಬದರ್ ಯುದ್ಧ ಚಾರಿತ್ರಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.ಈ ಯುದ್ಧದ ಮುಂಚೆಯೋ ನಂತರವೋ ಅಂತಹ ಒಂದು ಯುದ್ಧ ನಡೆದಿಲ್ಲ.ಅಬೂ ಸುಫ್ಯಾನುಬ್ನು ಹರ್ಬ್ ಕುರೈಶಿಗಳ ವ್ಯಾಪಾರ ಸಂಘಕ್ಕೆ ನೇತ್ರತ್ವವನ್ನು ನೀಡಿ ಸಿರಿಯಾ ಕ್ಕೆ ಹೋದರು.ವ್ಯಾಪಾರ ಸಂಘದಲ್ಲಿ 27 ಮಂದಿಯಿದ್ದರು.ಅವರು ಸಿರಿಯಾದಿಂದ ಮರಳಿ ಬರುವಾಗ ನೆಬಿ ಸ.ಅ 313 ಸ್ವಹಾಬಿಗಳೊಂದಿಗೆ ಅವರನ್ನು ಸೆರೆ ಹಿಡಿಯಲು ಹೊರಟರು.ಈ ವಿಷಯವನ್ನು ಅರಿತ ಅಬೂ ಸುಫ್ಯಾನ್ ಕುರೈಶಿಗಳಿಗೆ ವಿಷಯ ಮುಟ್ಟಿಸಲು ಲಂಲಮುಬ್ನು ಅಮ್ರಿನಿಲ್ ಗಿಫಾರಿಯನ್ನು ಕಳುಹಿಸಿದರು.
       ಈ ವಾರ್ತೆ ಕೇಳಿ ಮಕ್ಕಾ ನಿವಾಸಿಗಳೆಲ್ಲರೂ ಎಚ್ಚೆತ್ತರು.ಅವರು ಅಬೂಜಹಲನ ನೇತ್ರತ್ವದಲ್ಲಿ ಹೊರಟರು.ಈ ಸಂಘದಲ್ಲಿ ಸಾವಿರ ಸೈನಿಕರು, ನೂರು ಕುದುರೆಗಳು, ಏಳು ನೂರು ಒಂಟೆಗಳು ಇದ್ದವು.ವಾದ್ಯಮೇಳಗಳು ನರ್ತಕಿಗಳಾದ ಸ್ತ್ರೀಯರು ಒಳಗೊಂಡ ಈ ಸಂಘವು ಕುಣಿದು ಕುಪ್ಪಳಿಸುತ್ತಾ ಕೇಕೆಹಾಕುತ್ತಾ ಯುದ್ಧಕ್ಕೆ ಬೇಕಾದ ಸರ್ವ ಸಜ್ಜೀಕರಣದೊಂದಿಗೆ ಸಾಗುತ್ತಿತ್ತು.ಆದರೆ ನೆಬಿ ಸ.ಅ ರವರ ಸಂಘದಲ್ಲಿ ಕೇವಲ ಎರಡು ಕುದುರೆಗಳು ಮತ್ತು ಎಪ್ಪತ್ತು ಒಂಟೆಗಳು ಮಾತ್ರ ಇದ್ದವು.ಹೀಗಿರಲು ಅಬೂ ಸುಫ್ಯಾನ್ ಮತ್ತು ವ್ಯಾಪಾರ ಸಂಘ ಕಡಲು ಕಿನಾರೆಯ ದಾರಿ ಮೂಲಕ ಸುರಕ್ಷಿತರಾಗಿ ಮಕ್ಕಾ ತಲುಪಿದರು.ಅಬೂ ಜಹಲನ  ನೇತ್ರತ್ವದಲ್ಲಿ ಹೊರಟ ಸೈನ್ಯದೊಂದಿಗೆ ಮರಳಿ ಹೋಗಲು ಅಬೂಸುಫ್ಯಾನ್ ತಿಳಿಸಿದರು.ನಾವು ಮಕ್ಕಾ ತಲುಪಿದ್ದೇವೆ.ನೀವು ಯುದ್ಧ ಮಾಡುವುದು ಬೇಡ.ಹಿಂದಕ್ಕೆ ಮರಳಿ ಬನ್ನಿ ಎಂದು ಅಬೂಸುಫ್ಯಾನ್ ತಿಳಿಸಿದರೂ ಅಬೂಜಹಲ್ ಇದನ್ನು ಸಮ್ಮತಿಸಲಿಲ್ಲ.ಬದರ್ ಭೂಮಿಗೆ ತಲುಪಿ ಮೂರು ದಿವಸ ಅಲ್ಲಿ ಒಂಟೆಗಳನ್ನು ಕೊಯ್ದು ಮಾಂಸ ಮಾಡಿ ತಿಂದು ತೇಗಿ ಎಲ್ಲರಿಗೂ ನೀಡಿ ಮದ್ಯವನ್ನು ಕುಡಿಯುತ್ತಾ ತಂಗುವೆವು ಎಂದು ಅಬೂ ಜಹಲ್ ಅಹಂಕಾರದಿಂದ ಪ್ರಖ್ಯಾಪಿಸಿದನು.ಅರಬಿಗಳು ನಮ್ಮನ್ನು ಕಂಡು ಹೆದರಿ ಬದುಕಲು ಹೀಗೆ ಮಾಡುವುದು ಅನಿವಾರ್ಯವಾಗಿದೆ ಎಂದು ಅಬೂಜಹಲ್ ಅಭಿಪ್ರಾಯಪಟ್ಟನು.ಅಬೂಜಹಲನ ಈ ನಿರ್ಧಾರ ಸರಿ ಕಾಣದ ಬನೂಝುಹರ ಗೋತ್ರದ ನೂರು ಮಂದಿ ಹಿಂದೆ ಸರಿದು ಅವರು ಮರಳಿ ಮಕ್ಕಾಕ್ಕೆ ಹೋದರು.
        ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರ್ ತಲುಪಿದರು.ಸ್ವಹಾಬಿಗಳೊಂದಿಗೆ ನೆಬಿ ಸ.ಅ ಹೇಳಿದರು.ಇದೋ ನೋಡಿ ನಿಮ್ಮ ಮುಂದೆ ಮಕ್ಕಾದ ನಿಮ್ಮ ಪ್ರೀತಿಪಾತ್ರರು.ನಿಮ್ಮ ಬಂಧುಗಳು.ನೆಬಿ ಸ.ಅ ಮತ್ತು ಸ್ವಹಾಬಿಗಳು ಬದರಿನ ನೀರಿನ ಒರತೆಯಿರುವ ಜಾಗದಲ್ಲಿ ಟೆಂಟ್ ಹಾಕಿದರು.ಮುಶ್ರಿಕರಿಗೆ ನೀರು ಸಿಗದಿರಲು ಬಾಕಿ ಇರುವ ಎಲ್ಲಾ ನೀರಿನ ಗುಂಡಿಗಳನ್ನು ಮುಚ್ಚಿದರು.ಯುದ್ಧ ರಣರಂಗವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿರುವ ಎತ್ತರದ ಸ್ಥಳದಲ್ಲಿ ನೆಬಿ ಸ.ಅ ರವರಿಗೆ ವಿಶ್ರಾಂತಿಗಾಗಿ ಟೆಂಟನ್ನು ಹಾಕಲಾಯಿತು.
ನೆಬಿ ಸ.ಅ ಹಾಗು ಸ್ವಹಾಬಿಗಳು ಪ್ರಾರ್ಥನೆಯಲ್ಲಿ ನಿರತರಾಗಿ ರಾತ್ರಿಯನ್ನು ಕಳೆದರು.ನೆಬಿ ಸ.ಅ ಸುಜೂದಿನಲ್ಲಿ " ಯಾ ಹಯ್ಯುನ್ ಯಾ ಖಯ್ಯೂಂ " ಎಂದು ಹೇಳುತ್ತಿದ್ದರು. ರಾತ್ರಿ ಕಳೆದು ಹಗಲಾದಾಗ ಎರಡು ವಿಭಾಗಗಳು ಪರಸ್ಪರ ರಣರಂಗಕ್ಕಿಳಿದರು.ಮುಶ್ರಿಕರ ಭಾಗದಿಂದ ಅಸ್ವದುಲ್ ಮಖ್ಝೂಮಿ ಎರಗಿ ಬಂದು ಮುಸ್ಲಿಮರ ವಶದಲ್ಲಿರುವ ನೀರಿನ ಹೌಲಿನಿಂದ ನೀರು ಕುಡಿಯುವೆನೆಂದೂ ಅಥವಾ ಅದನ್ನು ಧ್ವಂಸಗೈಯ್ಯುವೆನೆಂದೂ ಆ ಮಾರ್ಗದಲ್ಲಿ ಸಾಯುವೆನೆಂದೂ ಶಪಥ ಮಾಡಿ ಮುನ್ನುಗ್ಗಿದ.ಅದೇ ರಭಸದಲ್ಲಿ ಹಂಝ ರ.ಅ ಮುನ್ನುಗ್ಗಿ ಅವನ ಕಾಲಿಗೆ ಬೀಸಿದರು.ಕಾಲಿಗೆ ಗಾಯವಾದರೂ ಅವನು ಮತ್ತೆ ಮುಸ್ಲಿಮರ ಹೌಲಿನ ಕಡೆ ಧಾವಿಸಿದಾಗ ಹಂಝ ರ.ಅ ಅವನನ್ನು ಅಲ್ಲಿ ಕೊಂದು ಹಾಕಿದರು.ಬಳಿಕ ದ್ವಂದ್ವ ಯುದ್ಧ ಆರಂಭವಾಯಿತು.ಕುರೈಶಿಗಳಲ್ಲಿ ಉತ್ಬತು ಇಬ್ನು ರಬೀಅಃ, ಸಹೋದರ ಶೈಬಃ ಹಾಗು ಮಗ ವಲೀದನೊಂದಿಗೆ ಕ್ರಮವಾಗಿ ಉಬೈದ ರ.ಅ, ಹಂಝ ರ.ಅ ಹಾಗು ಅಲೀ ರ.ಅ ಹೋರಾಡಿದರು.ಘೋರವಾದ ಯುದ್ಧ ನಡೆಯಿತು.ಹಂಝ ರ.ಅ ಮತ್ತು ಅಲೀ ರ.ಅ ಕೈಯಿಂದ ಶೈಬ ಮತ್ತು ವಲೀದ್ ಸಾವನ್ನಪ್ಪಿದರು.ಉಬೈದ ರ.ಅ ಮತ್ತು ಉತ್ಬತ್ ಪರಸ್ಪರ ಕಾದಾಡಿದರು.ಇಬ್ಬರಿಗೂ ತೀವ್ರ ಗಾಯಗಳಾಗಿದ್ದವು.ಇದನ್ನು ಕಂಡ ಹಂಝ ರ.ಅ ಮತ್ತು ಅಲಿ ರ.ಅ ಧಾವಿಸಿ ಬಂದು ಉತ್ಬತ್ ನನ್ನು ಕೊಂದು ಹಾಕಿದರು.ತೀವ್ರ ಗಾಯವಾಗಿದ್ದ ಉಬೈದ ರ.ಅ ರವರನ್ನು ನೆಬಿ ಸ.ಅ ರವರ ಸಮೀಪ ಕರೆದು ಕೊಂಡು ಹೋಗಲಾಯಿತು.( ಯುದ್ಧ ಮುಗಿದ ನಂತರ ಮದೀನಕ್ಕೆ ಮರಳಿ ಹೋಗುವಾಗ ಉಬೈದ ರ.ಅ ಶಹೀದಾದರು.)
        ಈಗ ಶತ್ರು ಪಾಳಯದಿಂದ ನಾಲ್ಕು ಮಂದಿ ಹತರಾದರು.ಮುಸ್ಲಿಂ ಪಾಳಯದಲ್ಲಿ ಉಬೈದ ರ.ಅ ತೀವ್ರ ಗಾಯವಾಗಿದ್ದಾರೆ.ಇದಾದ ಬಳಿಕ ನೆಬಿ ಸ.ಅ ಸ್ವಹಾಬಿಗಳನ್ನು ಸಾಲಾಗಿ ನಿಲ್ಲಿಸಿ ಧರ್ಮ ಯುದ್ಧದ ಪ್ರಾಧಾನ್ಯತೆಯನ್ನು ವಿವರಿಸಿ ಕೊಟ್ಟರು.ನೆಬಿ ಸ.ಅ ತನ್ನ ಎರಡು ಕೈಗಳನ್ನೆತ್ತಿ ಪ್ರಾರ್ಥಿಸಿದರು."" ಅಲ್ಲಾಹನೇ, ಮುಸ್ಲಿಮರು ಇಂದು ನಾಶ ಹೊಂದಿದರೆ ಭೂಮಿ ಮೇಲೆ ನಿನ್ನನ್ನು ಆರಾಧಿಸಲು ಬೇರೆ ಯಾರೂ ಇರಲಾರರು.ಶತ್ರುಗಳು ಪರಾಜಯ ಹೊಂದಲಿರುವರೆಂಬ ನಿನ್ನ ಮಾತನ್ನು ಪೂರ್ತಿಗೊಳಿಸು ಅಲ್ಲಾಹುವೇ ""  ಬಳಿಕ ನೆಬಿ ಸ.ಅ ಸ್ವಹಾಬಿಗಳೊಂದಿಗೆ ಅವರು ಪರಾಜಯ ಹೊಂದಲಿರುವರು ಎಂದು ಪ್ರಖ್ಯಾಪಿಸಿದರು.
      ಮುಸ್ಲಿಮರು ಮತ್ತು ಶತ್ರುಗಳೆಡೆಯಲ್ಲಿ ಪರಸ್ಪರ ಯುದ್ಧ ಶುರುವಾಯಿತು.ಘೋರ ಯುದ್ಧ ನಡೆಯಿತು.ಅಲ್ಲಾಹು ಮಲಕುಗಳನ್ನು ಧರೆಗೆ ಇಳಿಸಿ ಮುಸ್ಲಿಮರನ್ನು ಸಹಾಯಿಸಿದನು.ಮುಶ್ರಿಕರಾದ ಶತ್ರುಗಳು ಪರಾಜಯ ಹೊಂದಿದರು.ಅಬೂ ಜಹಲ್, ಉಮಯ್ಯಃ ಒಳಗೊಂಡ ನೇತಾರರು ಸೇರಿ ಎಪ್ಪತ್ತು ಮಂದಿ ಸಾವನ್ನಪ್ಪಿದರು.ಎಪ್ಪತ್ತು ಮಂದಿ ಶತ್ರುಗಳು ಬಂಧನಕ್ಕೊಳಗಾದರು.ಮುಸ್ಲಿಮರಲ್ಲಿ 14 ಮಂದಿ ರಕ್ತ ಸಾಕ್ಷಿಗಳಾದರು.ಆರು ಮುಹಾಜಿರುಗಳು ಮತ್ತು ಎಂಟು ಅನ್ಸಾರಿಗಳು.
    ಸತ್ಯ ಮತ್ತು ಅಸತ್ಯ ಬೇರ್ಪಟ್ಟ ಬದರ್ ಯುದ್ಧ ದಿನವು " ಯೌಮುಲ್ ಫುರ್ಖಾನ್ " ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು.ಆದುದರಿಂದಲೇ ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರ್ ಶುಹದಾಗಳಿಗೆ ಅತ್ಯಂತ ಮಹತ್ತರವಾದ ಪದವಿ ಲಭಿಸಿತು.ಅವರ ಕಳೆದು ಹೋದ ಪಾಪಗಳನ್ನು ಮತ್ತು ಮುಂದಿನ ಪಾಪಗಳನ್ನು ಮನ್ನಿಸಿದ್ದೇನೆ ಎಂದು ಅಲ್ಲಾಹನು ತಿಳಿಸಿದನು.ಎಲ್ಲಾ ವರ್ಷದ ರಮಳಾನ್ ಹದಿನೇಳರಂದು ಮತ್ತು ಇತರ ದಿವಸಗಳಲ್ಲಿಯೂ ಮುಸ್ಲಿಮರು ಬದರೀಙಳನ್ನು ಅನುಸ್ಮರಿಸುತ್ತಾರೆ.ಅವರ ಬರ್ಕತ್ತಿನಿಂದ ಅಲ್ಲಾಹು ನಮ್ಮನ್ನು ಇಹಪರದಲ್ಲಿ ವಿಜಯಗೊಳಿಸಲಿ.ಆಮೀನ್..

Wednesday, 9 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ - 13

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -13

ಪ್ರತಿರೋಧ.....

ಸಲಾಂ ಎಂಬ ಪವಿತ್ರ ನಾಮವಿರುವ ಅಲ್ಲಾಹನ ಶಾಂತಿಯ ಸಂದೇಶವಾಗಿದೆ ಪವಿತ್ರ ಇಸ್ಲಾಂ.ಪ್ರವಾದಿ ಸ.ಅ ರವರು ಜನರಿಗೆ ಉದಾತ್ತವಾದ ಶಾಂತಿಯ ಹಾದಿಯನ್ನು ತೋರಿಸಿದರು.ಮುಸ್ಲಿಮರು ಪರಸ್ಪರ ಕಾಣುವಾಗ ವಿನಿಮಯ ಮಾಡುವ ಮಾತು "ಅಸ್ಸಲಾಮು ಅಲೈಕುಂ" ( ನಿಮಗೆ ಅಲ್ಲಾಹನ ರಕ್ಷಣೆ ಇರಲಿ ) ಎಂದಾಗಿದೆ.ಇಸ್ಲಾಂ ಶಾಂತಿ ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ.
        ನೆಬಿ ಸ.ಅ ಜನರನ್ನು ಇಸ್ಲಾಮಿಗೆ ಆಹ್ವಾನಿಸುತ್ತಾ 13 ವರ್ಷ ಮಕ್ಕಾದಲ್ಲಿ ವಾಸಿಸಿದ್ದರು. ನೆಬಿ ಸ.ಅ ರವರನ್ನು ಮತ್ತು ವಿಶ್ವಾಸಿಗಳಾದ ಅನುಯಾಯಿಗಳನ್ನು ಕುರೈಶಿಗಳು ಕಠಿಣವಾಗಿ ಹಿಂಸಿಸಿದರು.ಕೊನೆಗೆ ಸ್ವಂತ ಊರಾದ ಮಕ್ಕಾದಿಂದ ಹೊರಹಾಕಿದರು.ಸ್ವಂತ ಊರು,ಮನೆ,ಕುಟುಂಬ ಹಾಗು ಸಂಪತ್ತನ್ನು ಉಪೇಕ್ಷಿಸಿ ಮದೀನ ತಲುಪಿದ ಅವರೊಂದಿಗೆ ಕುರೈಶಿಗಳು ಮತ್ತೆ ಶತ್ರುತ್ವ ಬೆಳೆಸಿದರು.ಅವರ ಕಡೆಯಿಂದ ಆಕ್ರಮಣಗಳು ಮುಂದುವರಿಯಿತು.ಶಾಂತವಾದ ವಾತಾವರಣ ನಿರ್ಮಾಣ ಮಾಡುವುದು ಅನಿವಾರ್ಯತೆಯಾದುದರಿಂದ ಅಲ್ಲಾಹು ನೆಬಿ ಸ.ಅ ರವರಿಗೆ ಯುದ್ಧಕ್ಕೆ ಅನುಮತಿ ನೀಡಿ ಆಯತ್ ಅವತೀರ್ಣಗೊಳಿಸಿದನು.ಹಿಜ್ರಾ ಎರಡನೇ ವರ್ಷದ ಸಫರ್ ತಿಂಗಳಲ್ಲಿಯಾಗಿದೆ ಈ ಅನುಮತಿ ಲಭಿಸಿದ್ದು.

ಅಲ್ಲಾಹು ಹೇಳಿದನು.
ಯುದ್ಧಕ್ಕೆ ವಿಧೇಯರಾದವರಿಗೆ ಯುದ್ಧ ಮಾಡಲು ಅನುಮತಿ ನೀಡಿರುತ್ತೇನೆ.ಕಾರಣ ಅವರು ಆಕ್ರಮಣಕ್ಕೊಳಗಾದವರಾಗಿದ್ದಾರೆ.ಖಂಡಿತವಾಗಿಯೂ ಅಲ್ಲಾಹು ಅವರಿಗೆ ಸಹಾಯ ಮಾಡಲು ಸಾಮರ್ಥ್ಯವುಳ್ಳವನಾಗಿದ್ದಾನೆ.

ಈ ಆಯತ್ ಅವತೀರ್ಣವಾಗುವುದಕ್ಕಿಂತ ಮೊದಲು 70 ಕ್ಕಿಂತಲೂ ಅಧಿಕ ಆಯತುಗಳಲ್ಲಿ ಯುದ್ಧವನ್ನು ನಿಷೇಧಿಸಿ ಆದೇಶ ಬಂದಿತ್ತು.
       ಯಹೂದಿಗಳು ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.ಅವರು ಒಪ್ಪಂದವನ್ನು ಮುರಿದು ವಂಚನೆ ನಡೆಸಿದಾಗ ಅಲ್ಲಾಹು ಅವರೊಂದಿಗೆ ಯುದ್ಧಕ್ಕೆ ಅನುಮತಿ ನೀಡಿದನು.ಮುಶ್ರಿಕರೆಲ್ಲರೂ ಒಗ್ಗಟ್ಟಾಗಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಬಂದಾಗ ಅವರೆಲ್ಲರೊಂದಿಗೂ ಯುದ್ಧ ಮಾಡಲು ಅಲ್ಲಾಹು ಆದೇಶವಿತ್ತನು.

"ಬಹು ದೈವಾರಾಧಕರೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಯುದ್ಧ ಮಾಡಿರಿ.ಅವರು ನಿಮ್ಮೊಂದಿಗೆ ಒಗ್ಗಟ್ಟಾಗಿ ಯುದ್ಧ ಮಾಡುವಂತೆ."

ಚುಟುಕಾಗಿ ಹೇಳುವುದಾದರೆ ಯುದ್ಧಕ್ಕೆ ಬಂದವರೊಂದಿಗೆ ಮಾತ್ರ ಯುದ್ಧವಿರುವುದು.
        ಯುದ್ಧಕ್ಕೆ ಅನುಮತಿ ಲಭಿಸಿದುದರಿಂದ ಶಾಂತಿ ಸ್ರಷ್ಟಿಸಲು ನೆಬಿ ಸ.ಅ ಹಲವು ಯುದ್ಧಗಳು ನಡೆಸಿದರು.ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿದರು.27 ಯುದ್ಧಗಳು ನೆಬಿ ಸ.ಅ ರವರ ನೇತ್ರತ್ವದಲ್ಲಿಯಾಗಿತ್ತು.ಈ ಯುದ್ಧಕ್ಕೆ  ಗಝ್ವಃ ಎಂದು ಕರೆಯಲಾಗುತ್ತದೆ.ಈ 27 ಯುದ್ಧಗಳಲ್ಲಿ ಕೇವಲ 8 ರಲ್ಲಿ ಮಾತ್ರವಾಗಿದೆ ಪರಸ್ಪರ ಕಾಳಗ,ಘರ್ಷಣೆ ಉಂಟಾದದ್ದು.ಬದರ್, ಉಹುದ್, ಖಂದಕ್, ಮುರೈಸಿಹ್, ಬನೂ ಖುರೈಲಃ, ಖೈಬರ್, ಹುನೈನ್, ತ್ವಾಯಿಫ್ ಎಂಬ ಎಂಟು ಯುದ್ಧಗಳು...
ನೆಬಿ ಸ.ಅ ಉಹುದ್ ನಲ್ಲಿ ಮಾತ್ರ ಯುದ್ಧ ಮಾಡಿದ್ದರು.ನೆಬಿ ಸ.ಅ ರವರ ಪವಿತ್ರ ಹಸ್ತದಿಂದ " ಉಬಯ್ಯು ಬ್ನು ಖಲಫ್ " ಎಂಬ ನಿರ್ಭಾಗ್ಯವಂತ ಮಾತ್ರ ಸಾವನ್ನಪ್ಪಿದ್ದು. ನೆಬಿ ಸ.ಅ 47 ಯುದ್ಧ ಸಂಘಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿದ್ದರು.ಈ ಯುದ್ಧಗಳಿಗೆ " ಸರಿಯ್ಯಃ " ಎಂದು ಕರೆಯಲಾಗುತ್ತದೆ.ಇಸ್ಲಾಮಿನ ಈ ಎಲ್ಲಾ ಯುದ್ಧಗಳಲ್ಲಿ 1018 ಮಂದಿ ಮಾತ್ರ ಸಾವನ್ನಪ್ಪಿದರು.259 ಮುಸ್ಲಿಮರು ಮತ್ತು 759 ಅಮುಸ್ಲಿಮರು.ಯುದ್ಧಗಳ ಚರಿತ್ರೆಯಲ್ಲಿಯೇ ಅತೀ ಕಡಿಮೆ ಸಾವು ನೋವುಗಳು ಸಂಭವಿಸಿದ್ದು ಇಸ್ಲಾಮಿನ ಯುದ್ಧಗಳಲ್ಲಿಯಾಗಿದೆ. ಪ್ರತಿರೋಧ ಮತ್ತು ಪ್ರಬೋಧನೆ ಈ ಎರಡು ಗುರಿಯನ್ನಿಟ್ಟು ಯುದ್ಧ ಮಾಡಿದ ಕಾರಣದಿಂದಾಗಿದೆ ಹೀಗೆ ಸಂಭವಿಸಿದ್ದು.ಆದುದರಿಂದಲೇ ನೆಬಿ ಸ.ಅ ಮಕ್ಕಾ ಕುರೈಶಿಗಳ ವಿರುದ್ಧ ನೇರವಾಗಿ ಯುದ್ಧ ಮಾಡದೇ ಕುರೈಶೀ ವ್ಯಾಪಾರ ಸಂಘದ ವಿರುದ್ಧ ಸೈನ್ಯವನ್ನು ಕಳುಹಿಸಿದ್ದು. ಮುಸ್ಲಿಮರಿಗೆ ಧೈರ್ಯ ನೀಡಲು ಮತ್ತು ಮಕ್ಕಾ ಮುಶ್ರಿಕರನ್ನು ದುರ್ಬಲಗೊಳಿಸಲು ಹಾಗು ಮುಹಾಜಿರುಗಳಿಗೆ ನಷ್ಟವಾಗಿ ಹೋದ ಸಂಪತ್ತನ್ನು ಪುನಃ ಮತ್ತೆ ಪಡೆಯುವ ಸಲುವಾಗಿತ್ತು.ಮುಶ್ರಿಕರನ್ನು ಒಪ್ಪಂದಕ್ಕೆ ಪ್ರೇರೇಪಿಸುವ ಸಲುವಾಗಿ ಈ ಎಲ್ಲಾ ತಂತ್ರಗಳನ್ನು  ನೆಬಿ ಸ.ಅ ಉಪಯೋಗಿಸಿದ್ದರು.

ಆದರೆ....
ಅವರು ಅದಕ್ಕೆ ತಯ್ಯಾರಾಗದ ಕಾರಣ ಯುದ್ಧವಲ್ಲದೆ ಬೇರೇನೂ ದಾರಿ ಇಲ್ಲವಾಯಿತು..

ಮುಂದುವರಿಯುವುದು....
ಮುಂದಿನ ಸಂಚಿಕೆಯಲ್ಲಿ ಇಸ್ಲಾಮಿನ ಐತಿಹಾಸಿಕ ವಿಜಯಕ್ಕೆ ನಿಮಿತ್ತವಾದ ಬದರ್ ಯುದ್ಧ..

ಓದಿರಿ.
®ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

Monday, 7 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ.ಸಂಚಿಕೆ 12

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -12

ಇಸ್ಲಾಮಿಕ್ ರಾಷ್ಟ್ರದ ಉದಯ..

ಖಝ್ರಜ್ ಅವ್ಸ್ ಗೋತ್ರಗಳಾದ ಅನ್ಸಾರಿಗಳು ಸಹಿತ ಮಕ್ಕಾದಿಂದ ತಲುಪಿದ ಮುಹಾಜಿರುಗಳು ಮತ್ತು ಬನೂ ಖುರೈಲಃ, ಬನೂ ಖೈನುಖಾಹ್ ಹಾಗು ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳಾಗಿದ್ದರು ಮದೀನ ನಿವಾಸಿಗಳು.ಮದೀನದಲ್ಲಿ ಇಸ್ಲಾಂ ಆಗಮನವಾಗುವುದಕ್ಕಿಂತ ಮುಂಚೆ ಸಹೋದರ ಗೋತ್ರಗಳಾಗಿದ್ದ ಅವ್ಸ್ ಮತ್ತು ಖಝ್ರಜ್ ಪರಸ್ಪರ ಕಚ್ಚಾಟದಲ್ಲಿ ತಲ್ಲೀನರಾಗಿದ್ದರು.ಅಂತಿಮವಾಗಿ ಅವರ ನಾಯಕರಲ್ಲಿ ಅಬ್ದುಲ್ಲಾಹಿಬ್ನು ಸಲೂಲ್ ಮಾತ್ರ ಬಾಕಿಯಾದ.ಅವನನ್ನು ಎರಡೂ ಗೋತ್ರದವರೂ ಸೇರಿ ರಾಜನನ್ನಾಗಿ ಮಾಡಿದರು.ಈ ಸಂದರ್ಭದಲ್ಲಿಯಾಗಿದೆ ಮದೀನಕ್ಕೆ ಪವಿತ್ರ ಇಸ್ಲಾಮಿನ ಆಗಮನವಾಗುವುದು.ಪವಿತ್ರ ಇಸ್ಲಾಮಿನ ಸುಂದರ ಸಂದೇಶ ತಲುಪುವುದರೊಂದಿಗೆ ಅವ್ಸ್ ಮತ್ತು ಖಝ್ರಜ್ ಗೋತ್ರಗಳು ಪರಸ್ಪರ ಸಾಹೋದರ್ಯತೆಯಿಂದ ಒಗ್ಗೂಡಿದರು.ಎಲ್ಲರೂ ಇಸ್ಲಾಂ ಧರ್ಮ ಸ್ವೀಕರಿಸಿದಾಗ ಅಬ್ದುಲ್ಲಾಹಿ ಬ್ನು ಸಲೂಲ್ ಬೇರೆ ದಾರಿಯಿಲ್ಲದೆ ಪ್ರತ್ಯಕ್ಷಕ್ಕೆ ಮುಸ್ಲಿಮನಾದರೂ ಆತ ಮತ್ತು ಆತನ ಕೆಲವು ಅನುಯಾಯಿಗಳು ಮುನಾಫಿಖುಗಳಾಗಿದ್ದರು.ಅವರು ಅವಿಶ್ವಾಸಿಗಳಿಗಿಂತ ಹೆಚ್ಚಾಗಿ ಮುಸ್ಲಿಮರಿಗೆ ಭಾರವಾದರು.ಒಳಗಿಂದೊಳಗೆ ಮುಸ್ಲಿಮರಿಗೆ ತೊಂದರೆ ನೀಡಲು ಶುರು ಮಾಡಿದರು.ಆದರೆ ನೆಬಿ ಸ.ಅ ಅವರ ಬಹಿರಂಗ ವರ್ತನೆಯನ್ನು ಪರಿಗಣಿಸಿ ಬಹಳ ತಂತ್ರಪೂರ್ವಕವಾಗಿ ಮುಂದೆ ಸಾಗಿದರು.
       ಯಹೂದಿ ಗೋತ್ರಗಳೊಂದಿಗೆ ನೆಬಿ ಸ.ಅ ಶಾಂತಿ ಒಪ್ಪಂದವನ್ನು ಮಾಡಿಕೊಂಡರು.ಹೀಗೆ ಮದೀನದಲ್ಲಿ ಶಾಂತವಾದ ವಾತಾವರಣ ನಿರ್ಮಾಣವಾಯಿತು.ಇಸ್ಲಾಂ ಮದೀನದಲ್ಲೆಡೆ ಪಸರಿಸಿತು.ಇಸ್ಲಾಮಿಗೆ ಶಕ್ತಿ ಹೆಚ್ಚಾಯಿತು.ಹಿಜ್ರಾ ಒಂದನೇ ವರ್ಷ ಜುಮುಅಃ ಮತ್ತು ಜಮಾಅತ್ ಹಾಗು ಬಾಂಗ್ ಮತ್ತು ಇಖಾಮತ್ ಇಸ್ಲಾಮಿನಲ್ಲಿ ಶರಈಗೊಳಿಸಲಾಯಿತು.ಎರಡನೇ ವರ್ಷ ರಮಳಾನ್ ಉಪವಾಸ,ಫಿತ್ರ್ ಝಕಾತ್ ಹಾಗು ಸಂಪತ್ತಿನ ಝಕಾತ್ ಕಡ್ಡಾಯಗೊಳಿಸಲಾಯಿತು.ಉಳುಹಿಯ್ಯತ್ ಮತ್ತು ಪೆರ್ನಾಳ್ ನಮಾಜುಗಳು ಸುನ್ನತಾಯಿತು.ಹದಿನಾರು ತಿಂಗಳುಗಳ ಕಾಲ ಬೈತುಲ್ ಮುಖದ್ದಸಿಗೆ ತಿರುಗಿ ನಮಾಜು ಮಾಡುತ್ತಿದ್ದರು.ಬಳಿಕ ಕಅಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶ ಬಂತು.ತನ್ನ ಪಿತಾಮಹರಾದ ಇಬ್ರಾಹಿಂ ನೆಬಿ ಅ.ಸ ರವರ ಮತ್ತು ಇಸ್ಮಾಇಲ್ ನೆಬಿ ಅ.ಸ ರವರ ಕಿಬ್ಲಃ ಆಗಿದ್ದಂತಹ ಕಅಬಃ ತನ್ನ ಕಿಬ್ಲಃ ಆಗಿ ಸಿಗಲು ನೆಬಿ ಸ.ಅ ರವರು ಆಗ್ರಹಿಸಿದ್ದರು.ಹಾಗೆಯೇ ಹಿಜರಾದ ಎರಡನೇ ವರ್ಷ ರಜಬ್ ತಿಂಗಳಲ್ಲಿ ಕಾಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶವಿರುವ ವಹ್ಯ್ ಅವತೀರ್ಣವಾಯಿತು.ನೆಬಿ ಸ.ಅ ರವರಿಗೆ ತುಂಬಾನೇ ಸಂತೋಷವಾಯಿತು.
   ಮದೀನದಲ್ಲಿ ನಿರ್ಮಾಣಗೊಂಡ ಮಸ್ಜಿದುನ್ನಬವಿ ಕೇಂದ್ರವಾಗಿರಿಸಿ ನೆಬಿ ಸ.ಅ ಮದೀನದ ಆಡಳಿತವನ್ನು ನಡೆಸಿದರು.ನ್ಯಾಯ ನೀತಿ ಜಾರಿಗೆ ತಂದರು.ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಪ್ರೀತಿ ವಿಶ್ವಾಸದಿಂದ ಕೂಡಿದ ಸಮೂಹವನ್ನು ಸ್ರಷ್ಠಿ ಮಾಡಿದರು.ಉದಾತ್ತವಾದ ಕುಟುಂಬ ವ್ಯವಸ್ಥೆಯನ್ನು ಉಂಟು ಮಾಡಿದರು.ಬಡ ನಿರ್ಗತಿಕರಿಗೆ ಆಶಾಕಿರಣವಾದರು.ಕೊಲೆ, ಜೂಜು, ಮದ್ಯಪಾನ, ವ್ಯಭಿಚಾರ, ಬಡ್ಡಿ ವ್ಯವಹಾರ, ಕಳ್ಳತನ, ದರೋಡೆ, ಜೀವಂತ ಹೂಳುವಿಕೆ, ವಂಚನೆ ಮುಂತಾದ ನೀಚ ಪ್ರವರ್ತನೆಗಳನ್ನು ಕಠಿಣವಾಗಿ ವಿರೋಧಿಸಿದರು.ಇವುಗಳಿಗೆ ಬಲವಾದ ಶಿಕ್ಷೆಯನ್ನು ಜಾರಿಗೆ ತಂದರು.ಮಾನವೀಯತೆಯನ್ನು ಗಟ್ಟಿಗೊಳಿಸಿದರು.ಯುದ್ಧದ ಸಮಯದಲ್ಲೂ ಮಾನವೀಯತೆಯನ್ನು ಕಾಪಾಡಲು ನಿರ್ದೇಶಿಸಿದರು.ಸ್ತ್ರೀಯರ ನೆಲೆ ಭದ್ರಗೊಳಿಸಿದರು.ಅವರನ್ನು ಪೀಡನೆಯಿಂದ ಮುಕ್ತಗೊಳಿಸಿದರು.ವಾರೀಸು ಸೊತ್ತವಕಾಶವನ್ನು ನೀಡಿದರು.ಎಲ್ಲಾ ವಿಧದ ಪೀಡನೆಗಳಿಂದಲೂ ಸಮೂಹವನ್ನು ಮುಕ್ತಗೊಳಿಸಿದರು.ಪ್ರಜಾ ಪ್ರಭುತ್ವ ಸಂವಿಧಾನವನ್ನು ಜಾರಿಗೊಳಿಸಿದರು.ಹೀಗೆ ಮದೀನದಲ್ಲಿ ಆರೋಗ್ಯಕರವಾದ ಶಾಂತಿ ಸಮಾಧಾನದ ಸೌಹಾರ್ದತೆಯಿಂದ ಕೂಡಿದ ಕ್ಷೇಮ ರಾಷ್ಟ್ರವು ಸ್ಥಾಪಿತವಾಯಿತು.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...