ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
---------------------------
ಸಂಚಿಕೆ -12
ಇಸ್ಲಾಮಿಕ್ ರಾಷ್ಟ್ರದ ಉದಯ..
ಖಝ್ರಜ್ ಅವ್ಸ್ ಗೋತ್ರಗಳಾದ ಅನ್ಸಾರಿಗಳು ಸಹಿತ ಮಕ್ಕಾದಿಂದ ತಲುಪಿದ ಮುಹಾಜಿರುಗಳು ಮತ್ತು ಬನೂ ಖುರೈಲಃ, ಬನೂ ಖೈನುಖಾಹ್ ಹಾಗು ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳಾಗಿದ್ದರು ಮದೀನ ನಿವಾಸಿಗಳು.ಮದೀನದಲ್ಲಿ ಇಸ್ಲಾಂ ಆಗಮನವಾಗುವುದಕ್ಕಿಂತ ಮುಂಚೆ ಸಹೋದರ ಗೋತ್ರಗಳಾಗಿದ್ದ ಅವ್ಸ್ ಮತ್ತು ಖಝ್ರಜ್ ಪರಸ್ಪರ ಕಚ್ಚಾಟದಲ್ಲಿ ತಲ್ಲೀನರಾಗಿದ್ದರು.ಅಂತಿಮವಾಗಿ ಅವರ ನಾಯಕರಲ್ಲಿ ಅಬ್ದುಲ್ಲಾಹಿಬ್ನು ಸಲೂಲ್ ಮಾತ್ರ ಬಾಕಿಯಾದ.ಅವನನ್ನು ಎರಡೂ ಗೋತ್ರದವರೂ ಸೇರಿ ರಾಜನನ್ನಾಗಿ ಮಾಡಿದರು.ಈ ಸಂದರ್ಭದಲ್ಲಿಯಾಗಿದೆ ಮದೀನಕ್ಕೆ ಪವಿತ್ರ ಇಸ್ಲಾಮಿನ ಆಗಮನವಾಗುವುದು.ಪವಿತ್ರ ಇಸ್ಲಾಮಿನ ಸುಂದರ ಸಂದೇಶ ತಲುಪುವುದರೊಂದಿಗೆ ಅವ್ಸ್ ಮತ್ತು ಖಝ್ರಜ್ ಗೋತ್ರಗಳು ಪರಸ್ಪರ ಸಾಹೋದರ್ಯತೆಯಿಂದ ಒಗ್ಗೂಡಿದರು.ಎಲ್ಲರೂ ಇಸ್ಲಾಂ ಧರ್ಮ ಸ್ವೀಕರಿಸಿದಾಗ ಅಬ್ದುಲ್ಲಾಹಿ ಬ್ನು ಸಲೂಲ್ ಬೇರೆ ದಾರಿಯಿಲ್ಲದೆ ಪ್ರತ್ಯಕ್ಷಕ್ಕೆ ಮುಸ್ಲಿಮನಾದರೂ ಆತ ಮತ್ತು ಆತನ ಕೆಲವು ಅನುಯಾಯಿಗಳು ಮುನಾಫಿಖುಗಳಾಗಿದ್ದರು.ಅವರು ಅವಿಶ್ವಾಸಿಗಳಿಗಿಂತ ಹೆಚ್ಚಾಗಿ ಮುಸ್ಲಿಮರಿಗೆ ಭಾರವಾದರು.ಒಳಗಿಂದೊಳಗೆ ಮುಸ್ಲಿಮರಿಗೆ ತೊಂದರೆ ನೀಡಲು ಶುರು ಮಾಡಿದರು.ಆದರೆ ನೆಬಿ ಸ.ಅ ಅವರ ಬಹಿರಂಗ ವರ್ತನೆಯನ್ನು ಪರಿಗಣಿಸಿ ಬಹಳ ತಂತ್ರಪೂರ್ವಕವಾಗಿ ಮುಂದೆ ಸಾಗಿದರು.
ಯಹೂದಿ ಗೋತ್ರಗಳೊಂದಿಗೆ ನೆಬಿ ಸ.ಅ ಶಾಂತಿ ಒಪ್ಪಂದವನ್ನು ಮಾಡಿಕೊಂಡರು.ಹೀಗೆ ಮದೀನದಲ್ಲಿ ಶಾಂತವಾದ ವಾತಾವರಣ ನಿರ್ಮಾಣವಾಯಿತು.ಇಸ್ಲಾಂ ಮದೀನದಲ್ಲೆಡೆ ಪಸರಿಸಿತು.ಇಸ್ಲಾಮಿಗೆ ಶಕ್ತಿ ಹೆಚ್ಚಾಯಿತು.ಹಿಜ್ರಾ ಒಂದನೇ ವರ್ಷ ಜುಮುಅಃ ಮತ್ತು ಜಮಾಅತ್ ಹಾಗು ಬಾಂಗ್ ಮತ್ತು ಇಖಾಮತ್ ಇಸ್ಲಾಮಿನಲ್ಲಿ ಶರಈಗೊಳಿಸಲಾಯಿತು.ಎರಡನೇ ವರ್ಷ ರಮಳಾನ್ ಉಪವಾಸ,ಫಿತ್ರ್ ಝಕಾತ್ ಹಾಗು ಸಂಪತ್ತಿನ ಝಕಾತ್ ಕಡ್ಡಾಯಗೊಳಿಸಲಾಯಿತು.ಉಳುಹಿಯ್ಯತ್ ಮತ್ತು ಪೆರ್ನಾಳ್ ನಮಾಜುಗಳು ಸುನ್ನತಾಯಿತು.ಹದಿನಾರು ತಿಂಗಳುಗಳ ಕಾಲ ಬೈತುಲ್ ಮುಖದ್ದಸಿಗೆ ತಿರುಗಿ ನಮಾಜು ಮಾಡುತ್ತಿದ್ದರು.ಬಳಿಕ ಕಅಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶ ಬಂತು.ತನ್ನ ಪಿತಾಮಹರಾದ ಇಬ್ರಾಹಿಂ ನೆಬಿ ಅ.ಸ ರವರ ಮತ್ತು ಇಸ್ಮಾಇಲ್ ನೆಬಿ ಅ.ಸ ರವರ ಕಿಬ್ಲಃ ಆಗಿದ್ದಂತಹ ಕಅಬಃ ತನ್ನ ಕಿಬ್ಲಃ ಆಗಿ ಸಿಗಲು ನೆಬಿ ಸ.ಅ ರವರು ಆಗ್ರಹಿಸಿದ್ದರು.ಹಾಗೆಯೇ ಹಿಜರಾದ ಎರಡನೇ ವರ್ಷ ರಜಬ್ ತಿಂಗಳಲ್ಲಿ ಕಾಬಾಲಯಕ್ಕೆ ತಿರುಗಿ ನಮಾಜು ಮಾಡಲು ಆದೇಶವಿರುವ ವಹ್ಯ್ ಅವತೀರ್ಣವಾಯಿತು.ನೆಬಿ ಸ.ಅ ರವರಿಗೆ ತುಂಬಾನೇ ಸಂತೋಷವಾಯಿತು.
ಮದೀನದಲ್ಲಿ ನಿರ್ಮಾಣಗೊಂಡ ಮಸ್ಜಿದುನ್ನಬವಿ ಕೇಂದ್ರವಾಗಿರಿಸಿ ನೆಬಿ ಸ.ಅ ಮದೀನದ ಆಡಳಿತವನ್ನು ನಡೆಸಿದರು.ನ್ಯಾಯ ನೀತಿ ಜಾರಿಗೆ ತಂದರು.ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಪ್ರೀತಿ ವಿಶ್ವಾಸದಿಂದ ಕೂಡಿದ ಸಮೂಹವನ್ನು ಸ್ರಷ್ಠಿ ಮಾಡಿದರು.ಉದಾತ್ತವಾದ ಕುಟುಂಬ ವ್ಯವಸ್ಥೆಯನ್ನು ಉಂಟು ಮಾಡಿದರು.ಬಡ ನಿರ್ಗತಿಕರಿಗೆ ಆಶಾಕಿರಣವಾದರು.ಕೊಲೆ, ಜೂಜು, ಮದ್ಯಪಾನ, ವ್ಯಭಿಚಾರ, ಬಡ್ಡಿ ವ್ಯವಹಾರ, ಕಳ್ಳತನ, ದರೋಡೆ, ಜೀವಂತ ಹೂಳುವಿಕೆ, ವಂಚನೆ ಮುಂತಾದ ನೀಚ ಪ್ರವರ್ತನೆಗಳನ್ನು ಕಠಿಣವಾಗಿ ವಿರೋಧಿಸಿದರು.ಇವುಗಳಿಗೆ ಬಲವಾದ ಶಿಕ್ಷೆಯನ್ನು ಜಾರಿಗೆ ತಂದರು.ಮಾನವೀಯತೆಯನ್ನು ಗಟ್ಟಿಗೊಳಿಸಿದರು.ಯುದ್ಧದ ಸಮಯದಲ್ಲೂ ಮಾನವೀಯತೆಯನ್ನು ಕಾಪಾಡಲು ನಿರ್ದೇಶಿಸಿದರು.ಸ್ತ್ರೀಯರ ನೆಲೆ ಭದ್ರಗೊಳಿಸಿದರು.ಅವರನ್ನು ಪೀಡನೆಯಿಂದ ಮುಕ್ತಗೊಳಿಸಿದರು.ವಾರೀಸು ಸೊತ್ತವಕಾಶವನ್ನು ನೀಡಿದರು.ಎಲ್ಲಾ ವಿಧದ ಪೀಡನೆಗಳಿಂದಲೂ ಸಮೂಹವನ್ನು ಮುಕ್ತಗೊಳಿಸಿದರು.ಪ್ರಜಾ ಪ್ರಭುತ್ವ ಸಂವಿಧಾನವನ್ನು ಜಾರಿಗೊಳಿಸಿದರು.ಹೀಗೆ ಮದೀನದಲ್ಲಿ ಆರೋಗ್ಯಕರವಾದ ಶಾಂತಿ ಸಮಾಧಾನದ ಸೌಹಾರ್ದತೆಯಿಂದ ಕೂಡಿದ ಕ್ಷೇಮ ರಾಷ್ಟ್ರವು ಸ್ಥಾಪಿತವಾಯಿತು.
No comments:
Post a Comment