ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
---------------------------
ಸಂಚಿಕೆ -11
ಅನ್ಸಾರಿಗಳು.....
ಪವಿತ್ರ ಮದೀನದ ಪ್ರಮುಖ ಎರಡು ಗೋತ್ರಗಳಾಗಿತ್ತು ಅವ್ಸ್ ಮತ್ತು ಖಝ್ರಜ್.ಹಾರಿಸತು ಇಬ್ನು ಸಅಲಬಃ ಮತ್ತು ಖೈಲ ಬಿಂತ್ ಕಾಹಿಲ್ ರವರ ಮಕ್ಕಳಾದ ಅವ್ಸ್ ಮತ್ತು ಖಝ್ರಜ್ ರವರ ಸಂತಾನ ಪರಂಪರೆಯಾಗಿರುವರು ಅವರು.ನಂತರದ ಕಾಲದಲ್ಲಿ ಮಕ್ಕಳು ಮೊಮ್ಮಕ್ಕಳಾಗಿ ಒಂದು ದೊಡ್ಡ ಸಮೂಹವಾಗಿ ಬೆಳೆದರು.ಅವ್ಸ್ ನ ಸಂತಾನ ಪರಂಪರೆ ಅವ್ಸ್ ಗೋತ್ರವಾಗಿ ಖಝ್ರಜ್ ನ ಸಂತಾನ ಪರಂಪರೆ ಖಝ್ರಜ್ ಗೋತ್ರವಾಗಿ ಪ್ರಸಿದ್ಧರಾದರು.ಈ ಎರಡು ಗೋತ್ರಗಳ ಮಧ್ಯೆ ಶತ್ರುತ್ವ ಹೊಗೆಯಾಡುತ್ತಿತ್ತು.ನಿರಂತರ ಯುದ್ಧಗಳು ನಡೆಯುತ್ತಿತ್ತು.ಈ ಒಂದು ಸಂದರ್ಭದಲ್ಲಾಗಿದೆ ಪವಿತ್ರ ಮದೀನಕ್ಕೆ ನೆಬಿ ಸ.ಅ ರವರ ಆಗಮನವಾಗಿದ್ದು.
ಇಸ್ಲಾಂ ಧರ್ಮ ಸ್ವೀಕರಿಸಿದ ಬಳಿಕ ಅವರು ಪರಸ್ಪರ ಸೌಹಾರ್ದತೆ ಬೆಳೆಯಿತು.ಒಂದೇ ತಾಯಿಯ ಮಕ್ಕಳೆಂಬಂತೆ ಪರಸ್ಪರ ಸಾಹೋದರ್ಯತೆಯಿಂದ ಪ್ರೀತಿ ವಿಶ್ವಾಸದಿಂದ ಜೀವಿಸಲು ಪ್ರಾರಂಭಿಸಿದರು.ಇದರ ಕುರಿತು ಕುರಾನ್ ಹೇಳುವುದು ಹೀಗೆ..
" ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಸ್ಮರಿಸಿರಿ.ನೀವು ಪರಸ್ಪರ ಶತ್ರುಗಳಾಗಿದ್ದೀರಿ.ಆಗ ಅಲ್ಲಾಹು ನಿಮ್ಮ ಹ್ರದಯಗಳನ್ನು ಒಂದುಗೂಡಿಸಿದನು.ಆದುದರಿಂದ ಅವನ ಅನುಗ್ರಹದಿಂದ ನೀವು ಪರಸ್ಪರ ಸಹೋದರರಾದಿರಿ". ( ಆಲ ಇಮ್ರಾನ್ 103 )
ಪರಸ್ಪರ ಸಹೋದರರಂತೆ ಒಗ್ಗೂಡಿದ ಅವ್ಸ್ ಖಝ್ರಜ್ ಗೋತ್ರದವರು ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನಕ್ಕೆ ಹಿಜ್ರಾ ಬಂದ ಬಳಿಕ ಅನ್ಸಾರಿಗಳು ( ಸಹಾಯಿಗಳು ) ಎಂಬ ಹೆಸರಿನಲ್ಲಿ ಅರಿಯಲ್ಪಟ್ಟರು.ಮಕ್ಕಾದಿಂದ ಬಂದ ನೆಬಿ ಸ.ಅ ಸಹಿತವಿರುವ ಮುಹಾಜಿರುಗಳಿಗೆ ಅಭಯಹಸ್ತ ಚಾಚಿ ಸಹಾಯ ಸಹಕಾರ ನೀಡಿದ ನಿಮಿತ್ತವಾಗಿದೆ ಅವರು ಅನ್ಸಾರಿ ಎಂಬ ನಾಮದಿಂದ ಹೆಸರುವಾಸಿಯಾದದ್ದು.
ಉದಾತ್ತವಾದ ಸಾಹೋದರ್ಯತೆ.
ನೆಬಿ ಸ.ಅ ರವರು ಒಂದೊಂದೇ ಮುಹಾಜಿರರನ್ನು ಅನ್ಸಾರಿಗಳಿಗೆ ವಹಿಸಿಕೊಡುತ್ತಿದ್ದರು.ಪ್ರತೀಯೋರ್ವ ಮುಹಾಜಿರರನ್ನು ವಹಿಸಿ ಕೊಡುವಾಗ ಅನ್ಸಾರಿಗಳು ಮುಗಿಬೀಳುತ್ತಿದ್ದರು.ಕೊನೆಗೆ ಚೀಟಿ ಹಾಕುವ ಮೂಲಕವಾಗಿದೆ ಮುಹಾಜಿರರನ್ನು ಅವರಿಗೆ ವಹಿಸಿ ಕೊಟ್ಟದ್ದು.ಪರಸ್ಪರ ಸಹಾಯ ಸಹಕಾರ ಹಾಗೂ ವಾರೀಸು ಸೊತ್ತಿನ ಅವಕಾಶಿ ಹೀಗೆ ಎಲ್ಲದರಲ್ಲೂ ಮುಹಾಜಿರುಗಳನ್ನು ಸಹೋದರರಂತೆ ಅನ್ಸಾರಿಗಳು ಪರಿಗಣಿಸಿದರು.
ಫಲ ಕೊಡುವ ವ್ರಕ್ಷಗಳನ್ನು ಎರಡೂ ವಿಭಾಗಗಳ ಮಧ್ಯೆ ಸಮಪಾಲು ಮಾಡಲು ಅನ್ಸಾರಿಗಳು ಆವಶ್ಯಪಟ್ಟರು.ನೆಬಿ ಸ.ಅ ಅದು ನಿರಾಕರಿಸಿದಾಗ ಫಲಗಳನ್ನು ಸಮಪಾಲು ಮಾಡಲು ಅವರು ಹೇಳಿದರು.ಇದರ ನಂತರ ಅನ್ಸಾರಿಗಳು ಮತ್ತು ಮುಹಾಜಿರುಗಳು ಜತೆಯಾಗಿ ತೋಟಗಳ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು ಮತ್ತು ಅದರ ಫಲಗಳನ್ನು ಸಮಪಾಲಾಗಿ ತೆಗೆಯುತ್ತಿದ್ದರು.
ಮುಹಾಜಿರುಗಳು ಅನ್ಸಾರಿಗಳಿಗೆ ಭಾರವಾಗದ ರೀತಿಯಲ್ಲಿ ಜೀವಿಸಲು ಇಷ್ಟಪಟ್ಟರು.ಅವರು ವ್ಯಾಪಾರದಲ್ಲಿಯೂ ಕ್ರಷಿಯಲ್ಲಿಯೂ ಏರ್ಪಟ್ಟರು.ಸ್ವಂತವಾಗಿ ಬದುಕಲು ಜೀವನಮಾರ್ಗವನ್ನು ಕಂಡರು.ಸಅದು ಬ್ನು ರಬೀಇನುಲ್ ಅನ್ಸಾರಿ ರ.ಅ ತನ್ನ ಮುಹಾಜಿರ್ ಸಹೋದರನಾದ ಅಬ್ದುರ್ರಹ್ಮಾನು ಬ್ನು ಅವ್ಫ್ ಎಂಬವರೊಂದಿಗೆ ಹೇಳಿದರು : ಸಹೋದರಾ..ನಾನು ಮದೀನದ ದೊಡ್ಡ ಶ್ರೀಮಂತನಾಗಿದ್ದೇನೆ.ನನ್ನ ಸೊತ್ತಿನ ಅರ್ಧದಷ್ಟು ನಾನು ನಿಮಗೆ ನೀಡುತ್ತೇನೆ.ನನಗೆ ಎರಡು ಪತ್ನಿಯರಿದ್ದಾರೆ.ನಿಮಗೆ ಇಷ್ಟಪಟ್ಟವಳು ಯಾರೆಂದು ನೋಡಿರಿ.ಅವಳನ್ನು ನಾನು ವಿವಾಹ ವಿಮೋಚನೆ ನಡೆಸಿ ನಿಮಗೆ ವಿವಾಹ ಮಾಡಿ ಕೊಡುತ್ತೇನೆ. " ನಿಮ್ಮ ಕುಟುಂಬದಲ್ಲಿಯೂ ಸಂಪತ್ತಿನಲ್ಲಿಯೂ ಅಲ್ಲಾಹು ಬರ್ಕತ್ ನೀಡಲಿ" ಎಂದು ಪ್ರಾರ್ಥಿಸಿ ಆ ನಿರ್ದೇಶವನ್ನು ಸಂತೋಷದಿಂದ ಅಬ್ದುರ್ರಹ್ಮಾನುಬ್ನು ಅವ್ಫ್ ತಿರಸ್ಕರಿಸಿದರು.ಬಳಿಕ ಅವರು ನನಗೆ ಮಾರುಕಟ್ಟೆ ತೋರಿಸಿ ಕೊಡಿರಿ.ನಾನು ನನ್ನ ಜೀವನ ಮಾರ್ಗಕ್ಕಾಗಿ ಸ್ವಂತವಾಗಿ ಕೆಲಸ ಮಾಡುವೆ ಎಂದು ಹೇಳಿದರು.ಹೇಳಿದಂತೆಯೇ ಅವರು ಬಿಸಿನೆಸ್ ಪ್ರಾರಂಭಿಸಿದರು.ಕೆಲವು ದಿನಗಳ ಬಳಿಕ ಖರ್ಜೂರದ ಬೀಜದಷ್ಟು ಬಂಗಾರ ನೀಡಿ ಅಬ್ದುರ್ರಹ್ಮಾನುಬ್ನು ಅವ್ಫ್ ಅನ್ಸಾರೀ ವನಿತೆಯನ್ನು ಮದುವೆಯಾದರು.ಒಂದು ಆಡನ್ನು ಕೊಯ್ದು ವಿವಾಹ ಭೋಜನಕೂಟವನ್ನೂ ಏರ್ಪಡಿಸಿದರು.
ಅನ್ಸಾರಿಗಳ ಮತ್ತು ಮುಹಾಜಿರುಗಳ ಸಾಹೋದರ್ಯತಾ ಬಾಂಧವ್ಯದ ಮಹತ್ವವು ವಿವರಣಾತೀತ.ಅಲ್ಲಾಹು ಅವರ ಕುರಿತು ಹೇಳಿದ್ದು ಹೀಗೆ..."ಇಸ್ಲಾಮಿಗೆ ಪ್ರಪ್ರಥಮವಾಗಿ ಪ್ರವೇಶಿಸಿದ ಮುಹಾಜಿರುಗಳ ಮತ್ತು ಅನ್ಸಾರಿಗಳ ಹಾಗು ಅವರನ್ನು ಒಳಿತಿನಲ್ಲಿ ಅನುಸರಿಸಿದವರ ಕುರಿತು ಅಲ್ಲಾಹು ಸಂತ್ರಪ್ತನಾಗಿರುವನು.ಅಲ್ಲಾಹನ ಕುರಿತು ಅವರೂ ಸಂತ್ರಪ್ತರಾಗಿರುವರು.ಅವರಿಗೆ ಅವನು ಕೆಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನವನ್ನು ರೆಡಿ ಮಾಡಿಟ್ಟಿರುವನು.ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದಾಗಿದೆ ಮಹಾ ವಿಜಯ"
ಅಲ್ಲಾಹು ನಮ್ಮನ್ನು ಈ ಮಹಾನರುಗಳನ್ನು ಅನುಸರಿಸುವವರ ವಿಭಾಗದಲ್ಲಿ ಸೇರಿಸಲಿ..
ಆಮೀನ್..
ಮುಂದುವರಿಯುವುದು...
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760
No comments:
Post a Comment